Saturday, May 11, 2024
spot_imgspot_img
spot_imgspot_img

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಸ್ನೇಹಬಂಧು ಯೋಜನೆಯ ಇಪ್ಪತ್ತೆಂಟನೆಯ ಸಹಾಯನಿಧಿ ವಿತರಣೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಇಪ್ಪತ್ತೆಂಟನೆಯ ಯೋಜನೆಯಲ್ಲಿ ನಾರಾಯಣ ಮೂಲ್ಯ ಕುಂಡಡ್ಕ ಪಾದೆ ಇವರಿಗೆ ಹಣವನ್ನು ನೀಡಲಾಯಿತು.

ನಾರಾಯಣ ಮೂಲ್ಯ ಕುಂಡಡ್ಕ ಪಾದೆ ಇವರಿಗೆ 50,000-ರೂ ಮೊತ್ತದ ಚೆಕ್ ನ್ನು ವಿಷ್ಣುಮೂರ್ತಿ ಯುವಕ ವೃಂದದ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ವಿತರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಯತೀಶ್ ಹಡೀಲು, ಸದಸ್ಯರಾದ ಕೃಷ್ಣಪ್ಪ ಅಡ್ಯಾಲು, ಕಾರ್ಯಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಬರೆ, ಹಾಗೂ ಯುವಕ ವೃಂದದ ಸದಸ್ಯರು ಹಾಗೂ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ವಿಷ್ಣುಮೂರ್ತಿ ಯುವಕವೃಂದದ ಇಪ್ಪತ್ತೆಂಟನಯ ಸ್ನೇಹಬಂಧು ಸಹಾಯನಿಧಿ ಯೋಜನೆಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು.

- Advertisement -

Related news

error: Content is protected !!