- Advertisement -
- Advertisement -
ವಿಟ್ಲ: ದುಷ್ಕರ್ಮಿಗಳು ಹಸುವನ್ನು ಕದ್ದೊಯ್ದ ಘಟನೆ ಮಿತ್ತೂರು ಹಾಲಿನ ಡಿಪ್ಪೋ ಬಳಿ ನಡೆದಿದೆ.
ದಾಮೋದರ ಏಮಾಜೆ ಎನ್ನುವವರ ಹಸು ಕಾಣೆಯಾದ ಹಿನ್ನಲೆ ಸಿಸಿಟಿವಿ ನೋಡಿದಾಗ ಅಪರಿಚಿತರು ವಾಹನದಲ್ಲಿ ಕೊಂಡೊಯ್ಯುತ್ತಿರುವ ಬಗ್ಗೆ ತಿಳಿದು ಬಂದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದಿನಾಂಕ 17/02/2023ರ ರಾತ್ರಿಯಿಂದ ದಿನಾಂಕ 18/02/2023ರ ನಡುವೆ ಹಸು ಕಾಣೆಯಾಗಿರುತ್ತದೆ. ಎಲ್ಲಾ ಕಡೆ ಹುಡುಕಾಡಿದರೂ ಅದು ಪತ್ತೆಯಾಗಿಲ್ಲ. ಮಿತ್ತೂರು ಹಾಲಿನ ಡಿಪ್ಪೋದಲ್ಲಿ ಸಿಸಿ ಕ್ಯಾಮಾರದಲ್ಲಿ ನೋಡಿದಾಗ ಬಗ್ಗೆ ಬೆಳಕಿಗೆ ಬಂದಿದೆ.
- Advertisement -