- Advertisement -
- Advertisement -
ಕೇಬಲ್ ಕದಿಯಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಆ ನಂತರ ಸಾರ್ವಜನಿಕರು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ದಿನಗೂಲಿ ನೆಲೆಯಲ್ಲಿ BSNL ಲೈನ್ ಮ್ಯಾನ್ ಆಗಿದ್ದು ಕೆಲ ತಿಂಗಳ ಹಿಂದೆ ಕಳ್ಳತನ ಆರೋಪದಲ್ಲಿ ಕೆಲಸ ಕಳ್ಕೊಂಡಿದ್ದ ಪುಣಚ ನಿವಾಸಿ ಸೇಸಪ್ಪ ಸಹಿತ ಆತನ ಸಹಚರ ಸೊತ್ತು ಸಹಿತ ಸಿಕ್ಕಿಬಿದ್ದ ಕೇಬಲ್ ಚೋರರು.
ಎರಡು ದ್ವಿಚಕ್ರ ವಾಹನದಲ್ಲಿ ಕದಿಯಲು ಬಂದಿದ್ದವರನ್ನು ಸ್ಥಳೀಯರು ಕೇಬಲ್ ಸಹಿತ ಪೊಲೀಸರ ವಶಕ್ಕೆ ನೀಡಿದ್ದಾರೆ.
BSNL ವಿಟ್ಲ ಇಂಜಿನಿಯರ್ ಸ್ಪಷ್ಟನೆ.!
ಈ ಬಗ್ಗೆ BSNL ವಿಟ್ಲ ಇಂಜಿನಿಯರ್ ಅವರನ್ನು ಸಂಪರ್ಕಿಸಿದಾಗ ಕೇಬಲ್ ಸಹಿತ ಸಿಕ್ಕಿಬಿದ್ದವರು ನಮ್ಮ ಇಲಾಖೆಯಲ್ಲಿಲ್ಲ. ಈ ಹಿಂದೆಯೇ ಅವರನ್ನು ಕೆಲಸದಿಂದ ಬಿಟ್ಟಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
- Advertisement -