- Advertisement -
- Advertisement -

ವಿಟ್ಲ: ಹಿಂದೂ ಕಾರ್ಯಕರ್ತರಾದ ರಕ್ಷಿತ್ ಹಾಗೂ ಗಿರೀಶ್ ರವರ ಮೇಲೆ ವಿಟ್ಲ ಸಮೀಪ ಹಲ್ಲೆಯಾಗಿದ್ದು, ಈ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ತೀವ್ರವಾಗಿ ಖಂಡಿಸಿದೆ.

ಹಲವು ದಿನಗಳಿಂದ ಅಲ್ಲಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದೆ., ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ಹಿಂದೂ ಸಮಾಜದ ವತಿಯಿಂದ ಇದು ಕೊನೆಯ ಎಚ್ಚರಿಕೆಯಾಗಿದ್ದು, ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷದ್ ವಿಟ್ಲ ತಾಲೂಕು ಅಧ್ಯಕ್ಷ ಪದ್ಮನಾಭ ಕಟ್ಟೆ, ಬಜರಂಗದಳ ಸಂಚಾಲಕ ಚಂದ್ರಹಾಸ್ ಕನ್ಯಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಲ್ಲೆಗೈದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸಿದೆ.


- Advertisement -








