ಕಾಡುಮಠದ ಬಾಡಿಗೆ ಮನೆ ನಿವಾಸಿ ಕುಳಾಲು ಆಟೋ ಚಾಲಕ ಮುಸ್ಲಿಂ ಸಮುದಾಯದವರ ಅಪ್ರಾಪ್ತ ಪುತ್ರಿ ಸೋಮವಾರ ಬೆಳಗ್ಗಿನಿಂದ ನಿಗೂಢ ನಾಪತ್ತೆಯಾಗಿದ್ದಳು.
ಸಂಜೆ ತನ್ನ ಕಾಸರಗೋಡಿನ ಸ್ನೇಹಿತೆ ಜೊತೆ ಮನೆಗೆ ಹಿಂದಿರುಗಿದಾಗ ಹೆತ್ತವರ ಕಿರಿಕಿರಿ, ನಿಂದನೆಗೆ ಬೆದರಿದ ಯುವತಿಯರಿಬ್ಬರು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಆಟೋ ಮೂಲಕ ವಿಟ್ಲದತ್ತ ಎಸ್ಕೇಪಾಗಿದ್ದರೆನ್ನಲಾಗಿದೆ.
ಈ ಸುದ್ದಿ ಬಯಲಾಗುತ್ತಿದ್ದಂತೆ ಕರೈ, ಕಾಡುಮಠ, ಸಾಲೆತ್ತೂರು ಪರಿಸರದ ಐವತ್ತಕ್ಕೂ ಹೆಚ್ಚು ಮುಸ್ಲಿಂ ಧರ್ಮರಕ್ಷಕ ಯುವಕರು ವಿಟ್ಲದಲ್ಲಿ ಸುತ್ತಾಡುತ್ತಾ ನಾಪತ್ತೆಯಾದ ಯುವತಿಯರ ಶೋಧ ನಡೆಸಿದ್ದಾರೆ.
ಇದೇ ಸಮಯ ವಿಟ್ಲದಲ್ಲಿ ಕುದ್ದುಪದವು ಮೂಲದ ಯುವತಿಯರಿಬ್ಬರು ತಮ್ಮ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರೆನ್ನಲಾಗಿದೆ.
ಇದೇ ಯುವತಿಯರು ನಾಪತ್ತೆಯಾದವರು ಎಂಬ ಅನುಮಾನಗೊಂಡ ಯುವಕರ ತಂಡ ಹಿಂದು ಮುಂದು ವಿಚಾರಿಸದೇ ಏಕಾಏಕಿ ಯುವತಿಯರ ಮೈಮೇಲೆ ಸಾರ್ವಜನಿಕವಾಗಿ ಅಸಭ್ಯವಾಗಿ ಕೈಹಾಕಿ ನಿಂದಿಸುತ್ತಾ ಮನಬಂದಂತೆ ಥಳಿಸಿ ರಾಕ್ಷಸೀ ಕೃತ್ಯ ಎಸಗಿದ್ದಾರೆ.
ನಾವು ಕುದ್ದುಪದವಿನವರಃ ಎಂದು ಕಣ್ಣೀರಿಟ್ಟು ಆಝಗಲಾಚಿದರೂ ಪುಂಡ ಧರ್ಮಾಂಧರ ಗುಂಪು ಮನಬಂದಂತೆ ಥಳಿಸಿ ಸಾರ್ಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಮಾಯಕ ಯುವತಿಯರಿಗೆ ಹಲ್ಲೆ ನಡೆಸಿ ಮೃಗೀಯ ವರ್ತನೆ ತೋರಿದ ಧರ್ಮಾಂಧ ಪುಂಡರು ಮಾದಕ ವ್ಯಸನಿಗಳೆಂಬ ಶಂಕೆ ಸಾರ್ವಜನಿಕವಾಗಿ ವ್ಯಕ್ತವಾಗಿದೆ.
ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಕರೈ ನಿವಾಸಿ ಅಬ್ದುಲ್ ಆರಿಫ್ ಎಂಬವನನ್ನು ವಶಕ್ಕೆ ಪಡೆದಿದ್ದಾರೆ.