Friday, May 3, 2024
spot_imgspot_img
spot_imgspot_img

ವಿಟ್ಲ: ಹಿಂದೂ ಜಾಗರಣ ವೇದಿಕೆ, ಕರೋಪಾಡಿ ಇದರ ಆಶ್ರಯದಲ್ಲಿ “ಕೆಸರ್ ಕಂಡೊಡು ಗೊಬ್ಬುಲು”

- Advertisement -G L Acharya panikkar
- Advertisement -

ವಿಟ್ಲ: ಹಿಂದೂ ಜಾಗರಣ ವೇದಿಕೆ, ಕರೋಪಾಡಿ ಇದರ ಆಶ್ರಯದಲ್ಲಿ ಮೂರನೇ ವರ್ಷದ “ಕೆಸರ್ ಕಂಡೊಡು ಗೊಬ್ಬುಲು” ಕಾರ್ಯಕ್ರಮವು ಆದಿತ್ಯವಾರದಂದು ನಡೆಯಲಿದೆ.

ದಿನಾಂಕ: 07-08-2022ರಂದು ಆದಿತ್ಯವಾರ ಬೆಳಿಗ್ಗೆ 9.00ಗಂಟೆಗೆ ಕರೋಪಾಡಿ ಗ್ರಾಮ ಕುಡ್ಪಲ್ತಡ್ಕದ ಸೋಣಾರ ಗದ್ದೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು ಬೆಳಗಿಸಲಿದ್ದಾರೆ. ಅತಿಥಿಗಳಾಗಿ ಈಶ್ವರ ಪ್ರಸಾದ್, ಅಧ್ಯಕ್ಷರು ಗುರು ಎಜುಕೇಶನ್‌ ಟ್ರಸ್ಟ (ರಿ), ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ, ಚಿನ್ಮಯಿ ವಕೀಲರು ಪುತ್ತೂರು,ಹಿ.ಜಾ.ವೇ ಪ್ರಾಂತ ಸಹ ಸಂಯೋಜಕರು, ರೋಷನ್‌ ಸಾಂತ ಕುಳ, ಪ್ರಗತಿ ಪರ ಕೃಷಿಕರು, ಶಿವಪ್ರಸಾದ್ ಶೆಟ್ಟಿ ಆನೆಯಾಲಗುತ್ತು, ಅಧ್ಯಕ್ಷರು ಭಾಜಪ ಕೊಳ್ಳಾಡು ಮಹಾಶಕ್ತಿ ಕೇಂದ್ರ, ಮಂಜುಳಾ ಬಿ, ಪ್ರಾಥಮಿಕ ಸುರಕ್ಷ ಅಧಿಕಾರಿ PHCO) ಕನ್ಯಾನ ಭಾಗವಹಿಸಲಿದ್ದಾರೆ.

ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!