Friday, April 26, 2024
spot_imgspot_img
spot_imgspot_img

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕ ವಿಷ್ಣು ಮೂರ್ತಿ ಶಾಖೆ ಮಾಣಿಲ ವತಿಯಿಂದ ಸ್ವಚ್ಛತಾ ಅಭಿಯಾನ

- Advertisement -G L Acharya panikkar
- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕ, ವಿಷ್ಣು ಮೂರ್ತಿ ಶಾಖೆ ಮಾಣಿಲ ಇದರ ವತಿಯಿಂದ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

ಇದರ ಅಂಗವಾಗಿ ಮಾಣಿಲದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಇದ್ದ ಹುಲ್ಲು, ಸೊಪ್ಪು ಹಾಗೂ ಮಾರ್ಗಕ್ಕೆ ಬಾಗಿದ್ದ ರೆಂಬೆಗಳನ್ನು ಸವರಿ ಸ್ವಚ್ಛಗೊಳಿಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಎಲ್ಲಾ ಕಾರ್ಯಕರ್ತ ಬಂಧುಗಳು, ಗ್ರಾಮಸ್ಥರು ಹಾಗೂ ಹುಲ್ಲು ತೆಗೆಯುವ ಯಂತ್ರದಲ್ಲಿ ಸಹಕರಿಸಿದ ಗೋವಿಂದ ರಾಜ ಬಟ್ಯಡ್ಕ, ಗಣೇಶ್ ಬಾಳೆಕಾನ ರವಿ ಜಿ .ಬಟ್ಯಡ್ಕ ಸತೀಶ್ ಬಾಕಿಲ ಪದವು ಇವರೆಲ್ಲರಿಗೂ ಹಾಗೂ ಊಟ, ಉಪಹಾರದಲ್ಲಿ ಸಹಕರಿಸಿದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾಣಿಲ ಇಲ್ಲಿಯ ಆಢಳಿತ ಮಂಡಳಿಗೂ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕ, ವಿಷ್ಣು ಮೂರ್ತಿ ಶಾಖೆ ಮಾಣಿಲ ಹೃತ್ಪೂರ್ವಕ ಧನ್ಯವಾದವನ್ನು ಸಲ್ಲಿಸುತ್ತದೆ.

- Advertisement -

Related news

error: Content is protected !!