Friday, May 10, 2024
spot_imgspot_img
spot_imgspot_img

ವೀರಕಂಭ: ಫೇಸ್‌ಬುಕ್‌ನಲ್ಲಿ ಉದ್ಯೋಗಕ್ಕೆ ಸಂಪರ್ಕ; 9.79 ಲಕ್ಷ ರೂ. ವಂಚನೆ

- Advertisement -G L Acharya panikkar
- Advertisement -
vtv vitla

ಬಂಟ್ವಾಳ: ಮೋಸ ಹೋಗುವವರು ಇರೋತನಕ ಮೋಸ ಮಾಡೋರು ಇದ್ದೆ ಇರುತ್ತಾರೆ ಅನ್ನೋದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಉದ್ಯೋಗದ ಜಾಹೀರಾತಿಗೆ ಮರುಳಾಗಿ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿನ ಮೂಲಕ ಉದ್ಯೋಗಕ್ಕೆ ಸಂಪರ್ಕಿಸಿ ವೀರಕಂಭ ಗ್ರಾಮದ ನಿವಾಸಿಯೊಬ್ಬರು 9.79 ಲಕ್ಷ ರೂ. ಕಳೆದುಕೊಂಡಿದ್ದಾರೆ.

ವೀರಕಂಭ ಗ್ರಾಮದ ನಡಾಲು ರಾಜೇಶ್‌ ಆಳ್ವ ಎನ್‌. ವಂಚನೆಗೊಳಗಾದವರು. ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಇಲ್ಲಿ ವೇತನ ಕಡಿಮೆಯಾದ ಹಿನ್ನೆಲೆಯಲ್ಲಿ ಫೆ. 18ರಂದು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿನಲ್ಲಿದ್ದ ವಾಟ್ಸ್‌ ಆ್ಯಪ್‌ ನಂಬರನ್ನು ಸಂಪರ್ಕಿಸಿ ಉದ್ಯೋಗ ವಿಚಾರಿಸಿದ್ದರು.

ಬಳಿಕ ಅವರು ಕಳುಹಿಸಿದ ಅಪ್ಲಿಕೇಶನ್ ಮೂಲಕ ಬಯೋ ಡೇಟಾ ಕಳುಹಿಸಿದ್ದು, ಮುಂದೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವೀಸಾ ಪ್ರೊಸೆಸಿಂಗ್ ಚಾರ್ಜ್, ಕಸ್ಟಮ್ ಕ್ಲಿಯರೆನ್ಸ್ ಹಾಗೂ ವಿವಿಧ ಶುಲ್ಕಗಳನ್ನು ಎಟಿಎಂ ಕ್ಯಾಶ್ ಡೆಪಾಸಿಟ್ ಮೆಷಿನ್, ಪೋನ್ ಪೇ, ಪೇಟಿಎಂ ಮೂಲಕ 9.79 ಲಕ್ಷರೂ, ಹಣ ಜಮೆ ಮಾಡಿದ್ದಾರೆ. ಈ ರೀತಿ ರಾಜೇಶ್ ಅವರು ವಂಚನೆಗೊಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಅವರು ನೀಡಿದ ದೂರಿನಂತೆ ದ.ಕ. ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!