- Advertisement -
- Advertisement -
ಶಿವಮೊಗ್ಗ: ವಿಧಾನ ಪರಿಷತ್ ನಲ್ಲೂ ಶಿವಮೊಗ್ಗದಲ್ಲಿನ ಹರ್ಷಾ ಸಾವಿನ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿ ಪ್ರತಿಭಟಿಸಿದ್ದು, ಹರ್ಷ ಹತ್ಯೆಯ ಹಿಂದೆ ಈಶ್ವರಪ್ಪ ಇದ್ದಾರೆ ಎಂದು ಪ್ರತಿಭಟನೆ ನಡೆಸಿದರು. ಅಲ್ಲದೇ ಸಚಿವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆಯೂ ಆಗ್ರಹ ಕೇಳಿ ಬಂದಿದೆ.
ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಳೆದ ವರ್ಷ ಹರ್ಷ ತಾಯಿ ನನ್ನ ಮಗ ಬಜರಂಗದಳದ ಕಾರ್ಯಕರ್ತನಲ್ಲ ಎಂದು ಎಸ್ಪಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಈಗ ನೋಡಿದ್ರೇ ಕೊಲೆಯಾದ ಹರ್ಷ ಬಜರಂಗದಳ ಕಾರ್ಯಕರ್ತ ಎನ್ನಲಾಗುತ್ತಿದೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೊಲೆ ವಿಚಾರಕ್ಕೆ ಕೋಮು ಬಣ್ಣ ಕಟ್ಟೋದು, ಈಶ್ವರಪ್ಪ ಹಾಗೂ ಬಿಜೆಪಿಗೆ ಹೊಸದಲ್ಲ ಎಂದು ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.!
ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ: ಶಿವಮೊಗ್ಗದಲ್ಲಿ ಉದ್ವಿಗ್ನ, ಹಲವೆಡೆ ಕಲ್ಲು ತೂರಾಟ
- Advertisement -