Wednesday, April 24, 2024
spot_imgspot_img
spot_imgspot_img

ಶ್ರೀರಾಮ ಸಲಿಂಗಕಾಮಿ, ವನವಾಸಕ್ಕೆ ಹೋಗಿದ್ದು ಹನಿಮೂನ್‌..!? ನೂಪುರ್ ಶರ್ಮಾ ಬಗ್ಗೆ ಬಾಯಿಗೆ ಬಂದ ಹಾಗೆ ಆಕ್ರೋಶ ಹೊರಹಾಕಿದ ಕಾಂಗ್ರೆಸ್‌ನಿಂದಲೇ ಈ ಅವಹೇಳನ..!

- Advertisement -G L Acharya panikkar
- Advertisement -

ನೂಪುರ್ ಶರ್ಮಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೆಸ್‌ ಕೂಟ ಈಗ ಶ್ರೀರಾಮ, ಸೀತೆ, ಹನುಮಂತನ ಬಗ್ಗೆ ಕೀಳಾಗಿ ಮಾತನಾಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ಲಬ್ ಹೌಸ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಕಾಂಗ್ರೆಸ್ ಐ ಟಿ ಸೆಲ್’ನ ಪುತ್ತೂರಿನ ಶೈಲಜಾ ಅಮರ್ ನಾಥ್ ಧಕ್ಕೆ ಉಂಟುಮಾಡಿದ್ದಾರೆ. ಮತ್ತು ಕೀಳಾಗಿ ರಾಮ ಸೀತೆ ಹನುಮಂತರನ್ನು ಬಿಂಬಿಸಿದ್ದಾರೆ.

ಸದ್ಯ ಕ್ಲಬ್ ಹೌಸ್‌ನಲ್ಲಿ ಗೇಲಿ ಮಾಡಿದ ಆಡಿಯೋ ಸಖತ್ ವೈರಲ್ ಆಗುತ್ತಿದ್ದು ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಅದರಲ್ಲೂ ಮರ್ಯಾದಾ ಪುರುಷೋತ್ತಮನ ರಾಮ ಮತ್ತು ಅವನ ಬಂಟ ಹನುಮಂತನ ಸಂಬಂಧವನ್ನು ಲೈಂಗಿಕ ದೃಷ್ಟಿಯಲ್ಲಿ ಹೋಲಿಸಲಾಗಿದೆ. ಶ್ರೀರಾಮನನ್ನು ಸಲಿಂಗಕಾಮಿ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಸೀತಾ ಮಾತೆಯ ಹುಟ್ಟಿನ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಹನುಮಂತ ಒಬ್ಬ ಬಿರಿಯಾನಿ ಸಪ್ಲೈಯರ್ ಎಂದೂ ಹೇಳಿದ್ದಾರೆ.

ಕ್ಲಬ್ ಹೌಸ್‌ನಲ್ಲಿ ನಡೆದ ಸಂಭಾಷಣೆಯ ಆಡೀಯೋ ಇಲ್ಲಿದೆ ಕೇಳಿ..!

ಕಳೆದ ಕೆಲವು ವಾರಗಳಿಂದ ಭಾರತದ ಹಲವು ಕಡೆಗಳಲ್ಲಿ ಉದಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‍ ಶರ್ಮಾ ಪೈಗಂಬರ್ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿ ಮುಸ್ಲಿಂಮರು ಗಲಭೆ ಸೃಷ್ಟಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ ಬಾಯಿಗೆ ಬಂದ ಹಾಗೆ ಟ್ವೀಟ್‌ ಮಾಡಿ ಆಕ್ರೋಶ ಹೊರ ಹಾಕಿತ್ತು.

ಪೈಗಂಬರ್ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟರೆ ಹಿಂಸಾಚಾರಕ್ಕೆ ತಿರುಗುತ್ತೀರಿ..!? ದೈವ ದೇವರುಗಳನ್ನು ನಿಂದಿಸುವುದು, ಚಿತ್ರ ವಿಚಿತ್ರವಾಗಿ ಎಡಿಟ್ ಮಾಡಿ ಪೋಸ್ಟ್‌ ಮಾಡುವುದು ಎಷ್ಟು ಸರಿ? ಪ್ರತಿಭಟನೆ ಮಾಡಿ ತಾಕತ್ತು ತೋರಿಸಲು ಮುಂದಾದವರು ಕುವೈತ್‌ನಿಂದ ಗೇಟ್‌ ಪಾಸ್‌

ಹಿಂದೂಗಳು ಬೆಂಕಿ ಹಚ್ಚಬೇಕಾ..? ಅಥವಾ ಕಲ್ಲು ತೂರಬೇಕಾ..?
ಪೈಗಂಬರ್ ಬಗ್ಗೆ ನೂಪುರ್‍ ಶರ್ಮಾ ಹೇಳಿದ ಮಾತುಗಳಿಂದ ಆಕ್ರೋಶಗೊಂಡ ಅನೇಕರು ಟ್ವೀಟ್‌, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರೋದು ಮಾತ್ರವಲ್ಲ, ದೇಶಕ್ಕೆ ಬೆಂಕಿ ಇಟ್ಟಿದ್ದಾರೆ. ಈ ಕಿಡಿ ಕಾಶ್ಮೀರದಿಂದ ಕನ್ಯಾಕುಮಾರಿವಗೂ ಧಗಧಗಿಸಿತ್ತು. ಕಲ್ಲು ತೂರಾಟ, ಗಲಭೆ, ಹಿಂಸಾಚಾರಕ್ಕೂ ಕಾರಣವಾಗಿತ್ತು. ಈ ಕಿಚ್ಚು ಇಡೀ ದೇಶಾದ್ಯಂತ ಹೊತ್ತಿಕೊಂಡಿತ್ತು. ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನಾಕಾರರು ಅಟ್ಟಹಾಸ ಮೆರೆದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಧಗಧಗಿಸ್ತಿದೆ. ಪ್ರತಿಭಟನಾಕಾರರು ಕಲ್ಲು ತೂರಿ ಮತ್ತೆ ಹುಚ್ಚಾಟ ಮೆರೆದಿದ್ದಾರೆ. ಇದೂ ಸಾಲದೆಂಬಂತೆ ಪಶ್ಚಿಮ ಬಂಗಾಳ ಬೆತುಗಾದಹರಿ ರೈಲ್ವೇ ಸ್ಟೇಷನ್‌ಗೆ ನುಗ್ಗಿ ಟ್ರೈನ್‌ವೊಂದನ್ನ ಧ್ವಂಸಗೊಳಿಸಿದ್ದಾರೆ.

ಕರಾವಳಿಯಲ್ಲಿ ದೈವ ದೇವರುಗಳ ನಿಂದನೆಗೆ ಹಿಂದೂ ಧರ್ಮೀಯರೂ ಯಾವತ್ತೂ ಹಿಂಸಾಚಾರಕ್ಕೆ ಇಳಿದಿಲ್ಲ…!


ದೇಶದಲ್ಲಿ ಆಗುವ ವಿಚಾರ ಬಿಟ್ಟಬಿಡಿ. ಕರಾವಳಿ ದೈವದೇವರುಗಳ ನೆಲಬೀಡು. ಇಲ್ಲಿ ಈ ಹಿಂದೆಯೂ ಮುಸ್ಲಿಂಮರು ದೈವದ ಗುಡಿ ಗೋಪುರಗಳನ್ನು ಅಪವಿತ್ರಗೊಳಿದ್ದರು. ದೈವಕ್ಕೆ ನಿಂದಿಸಿದ್ದರು. ಚಿತ್ರ ವಿಚಿತ್ರವಾಗಿ ದೇವರನ್ನು ತೋರಿಸಿದ್ದರು. ಆದರೆ ಈ ಬಗ್ಗೆ ಯಾರೂ ಕೂಡ ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಿಲ್ಲ. ಕಲ್ಲು ತೂರಲಿಲ್ಲ, ಪೊಲೀಸರ ಮೇಲೆ ಕಲ್ಲೆಸೆದು ಸಾರ್ವಜನಿಕ ಆಸ್ಥಿಯನ್ನು ಹಾಳು ಮಾಡಲಿಲ್ಲ..!

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಹೀನ ಕೃತ್ಯ ! – ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ

ಇದನ್ನೂ ಓದಿ: ವಿಟ್ಲ: ಒಳ ಉಡುಪು ಬಿಗಿಯಾಗಿ ಧರಿಸಿ….! ಶಿವ ದೇವರ ಬಗ್ಗೆ ವಾಟ್ಸಾಪ್‌ನಲ್ಲಿ ಅವಹೇಳನ

ಇದನ್ನೂ ಓದಿ: ವಿಟ್ಲ: ಹಿಂದೂ ದೈವ ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಕಿಡಿಗೇಡಿಗಳು

- Advertisement -

Related news

error: Content is protected !!