Sunday, June 29, 2025
spot_imgspot_img
spot_imgspot_img

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಜಬ್ಬರ್ ರವರು ಉದ್ಘಾಟಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಉಮರಂಗಿ ಶರಣಪರವರು ಸ್ವಾಗತಿಸುತ್ತಾ ತರಬೇತಿಯ ಅವಶ್ಯಕತೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ತರಬೇತಿದಾರರಾಗಿ ಆಗಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಗಡಿಯಾರ ಶಾಲೆಯ ಅಂಗ್ಲ ಭಾಷ ಬೋಧಕರಾದ ನಿತ್ಯನಾಂದ ರವರು ಶಾಲಾಭಿವೃದ್ದಿ ಸಮಿತಿಯ ಸದಸ್ಯರ ಕಾರ್ಯ ಹಾಗೂ ಕರ್ತವ್ಯ ಮತ್ತು ಶಾಲಾಭಿವೃದ್ಧಿ ಸಮಿತಿಯ ರಚನೆಯ ಬಗ್ಗೆ ವಿಸ್ತಾರವಾಗಿ ಮನದಟ್ಟಾಗುವ ರೀತಿಯಲ್ಲಿ ವಿವರಿಸಿ ಸದಸ್ಯರು ಕಾರ್ಯಪ್ರವರ್ತರಾಗುವಂತೆ ಹುರಿದುಂಬಿಸಿದರು.

ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಹಬೀಬ್ ಮೂಹ್ಸಿನ್, ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಆಶಾಲತಾ ಕರಿಮಜಲು, ಮಾಜಿ ಅದ್ಯಕ್ಷ ರಾದ ಶರೀಫ್ ಕೆ. ಎಸ್. ಅಬ್ದುಲ್ ಖಾದರ್ ಪಾಟ್ರಕೊಡಿ, ಜಯಂತಿ, ಲಕ್ಷ್ಮಿ ಪಾಟ್ರಕೊಡಿ ಮಹಮ್ಮದ‌ ಬಿ,ಅಬ್ದುಲ್ ರಜಾಕ್ ಕೆ. ಪಿ. ಸಿದೀಕ್, ಬದ್ರುನೀಶ ಪಾಟ್ರಕೊಡಿ, ಹಾಗೂ ಎಲ್ಲಾ ಶಾಲಾಭಿವೃದ್ದಿ ಸದಸ್ಯರು ಭಾಗವಹಿಸಿದರು. ಶಾಲಾ ಶಿಕ್ಷಕರಾದ ಮುಬಾರಕ್ ರವರು ಕಾರ್ಯಕ್ರಮ ನಿರೂಪಿಸಿ, ಗುರುರಾಜ್ ವಂದಿಸಿದರು.

- Advertisement -

Related news

error: Content is protected !!