Friday, April 19, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ಅಧ್ಯಾಪಕನ ಕಾಮ ಕೃತ್ಯಕ್ಕೆ ಎನ್ ಎಸ್ ಯುಐನಿಂದ ಖಂಡನೆ; ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಗೆ ಆಗ್ರಹ!

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ವಿದ್ಯಾರ್ಥಿಗಳಿಗೆ ಮಾರ್ಗದರ್ಶರಾಗಬೇಕಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿಯ ಮೇಲೆ ಸುಬ್ರಹ್ಮಣ್ಯದ ಪ್ರತಿಷ್ಠಿತ ಶಾಲೆಯಲ್ಲಿಅತ್ಯಾಚಾರ ನಡೆದಿರುವುದು ಖಂಡನೀಯ. ಈ ಕೃತ್ಯವನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಉಗ್ರವಾಗಿ ಖಂಡಿಸುತ್ತದೆ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಿ ಸಂತ್ರಸ್ತೆಗೆ ನ್ಯಾಯ ಒದಗಬೇಕು.

ಇದನ್ನೂ ಓದಿ: ಬಂಟ್ವಾಳ: ಪೈಪ್‌ಲೈನ್‌ ಕೊರೆದು ಡೀಸೆಲ್ ಕಳವು ಪ್ರಕರಣ; ಪ್ರಮುಖ ಆರೋಪಿ ಖಾಕಿ ವಶಕ್ಕೆ!

ಕುಕ್ಕೆ ಸುಬ್ರಹ್ಮಣ್ಯನ ಪೋಷಣೆಯಲ್ಲಿರುವ ವಿದ್ಯಾಸಂಸ್ಥೆಗೆ ಕಪ್ಪು ಚುಕ್ಕೆಯನ್ನಿಟ್ಟ ಈತನನ್ನು ಈ ಕೂಡಲೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಈ ಮೂಲಕ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸುತ್ತದೆ ಹಾಗೂ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಎನ್ ಎಸ್ ಯು ಐ ಉಗ್ರವಾಗಿ ಹೋರಾಟದ ಎಚ್ಚರಿಕೆ ನೀಡುತ್ತದೆ ಎಂದು ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಲ ಅವರು ಈ ಮೂಲಕ ತಿಳಿಸಿರುತ್ತದೆ.

driving
- Advertisement -

Related news

error: Content is protected !!