Sunday, May 5, 2024
spot_imgspot_img
spot_imgspot_img

ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಹೊಡೆದಾಟ

- Advertisement -G L Acharya panikkar
- Advertisement -

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಇತ್ತಂಡಗಳ ನಡುವೆ ಹೊಡೆದಾಟ ಆದ ಘಟನೆ ನಡೆದಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ – ಕೈಕಂಬದಲ್ಲಿ ಫೆ ೦೮ರ ಬುಧವಾರ ರಾತ್ರಿ ಜಗಳ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಸಹೋದರ ಆದಿಲ್ ಕಾರು ಚಲಾಯಿಸುತ್ತಿದ್ದರು. ಬೈಕಿನಲ್ಲಿ ಹೋಗುತ್ತಿದ್ದ ನಾಗೇಶ್ ಎಂಬವರ ಬೈಕಿಗೆ ಕಾರು ತಾಗಿತ್ತು. ಪರಿಣಾಮ ಬೈಕಿನಲ್ಲಿ ಹೋಗುತ್ತಿದ್ದ ನಾಗೇಶ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯವಾಗಿದೆ. ಈ ವೇಳೆ ಎರಡು ಸಮುದಾಯದ ಜನ ಗುಂಪು ಸೇರಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬೈಕ್ ಗೆ ಕಾರ್ – ಬೈಕಿ ತಾಗಿದ ಕಾರಣಕ್ಕೆ ಇತ್ತಂಡಗಳು ಹೊಡೆದಾಡಿಕೊಂಡಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸುರತ್ಕಲ್ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅಲ್ಲ್ಲಿದ್ದ ಜನರನ್ನು ಚದುರಿಸಿದರು. ಬೈಕ್ ಸವಾರ ನಾಗೇಶ್ ಹಾಗೂ ಆದಿಲ್ ನ ಚಿಕ್ಕಪ್ಪ ಉಮರ್ ಫಾರೂಕ್ ಒಳರೋಗಿಯಾಗಿ ದಾಖಲಾಗಿದ್ದಾರೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಇಬ್ಬರು ಆರೋಪ – ಪ್ರತ್ಯಾರೋಪ ಮಾಡಿ ಸುರತ್ಕಲ್ ಠಾಣೆಯಲ್ಲಿ ದೂರು – ಪ್ರತಿ ದೂರು ನೀಡಿದ್ದಾರೆ.

ಅಪಘಾತವೋ? ಸೈಡ್ ಕೊಡುವ ನೆಪವೋ?
ಇನ್ನು ಈ ಜಗಳಕ್ಕೆ ಯಾವುದು ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಕೆಲವೊಂದು ಮೂಲಗಳು ಕಾರು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ ಎಂದರೆ ಕೆಲ ಮೂಲಗಳು ಸೈಡ್ ಕೊಡುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

- Advertisement -

Related news

error: Content is protected !!