Thursday, May 2, 2024
spot_imgspot_img
spot_imgspot_img

ಸುರತ್ಕಲ್‌: ಬಾಲಕನನ್ನು ಕಿಡ್ಯಾಪ್‌ ಮಾಡಿ ಹಣ, ಮೊಬೈಲ್‌ ದರೋಡೆ

- Advertisement -G L Acharya panikkar
- Advertisement -

ಸುರತ್ಕಲ್: 16ವರ್ಷದ ಬಾಲಕನನ್ನು ಕಿಡ್ಯಾಪ್‌ ಮಾಡಿದ್ದ ಗಾಂಜಾ ಗ್ಯಾಂಗ್‌ ಸದಸ್ಯರು ಬಾಲಕನಿಂದ ಮೊಬೈಲ್‌ ಹಾಗೂ ಹಣ ದರೋಡೆ ಮಾಡಿ ಬೆದರಿಕೆ ಒಡ್ಡಿದ ಘಟನೆ ಸುರತ್ಕಲ್‌ನಲ್ಲಿ ನಡೆದಿದ್ದು, ಸುರತ್ಕಲ್‌ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್‌ ಶೆಟ್ಟಿ (24) ಮತ್ತು ಚೇತನ್‌ (23) ಬಂಧಿತರು.

ಪೆಲತ್ತೂರು ಬಳಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ಬಾಲಕ ಗಾಯಗೊಂಡು ಬಿದ್ದಿದ್ದು, ಆ ಬಾಲಕ ಆರೋಪಿಗಳ ಸಹಾಯ ಕೇಳಿ ದ್ವಿಚಕ್ರ ವಾಹನ ಹತ್ತಿದ್ದ. ಬಳಿಕ ಬಾಲಕನನ್ನು ಎಟಿಎಂಗೆ ಕರೆದೊಯ್ದು ಹಣ ಡ್ರಾ ಮಾಡಿ ಬಾರ್‌ಗೆ ಕರೆದೊಯ್ದು ಆತನ ಹಣದಲ್ಲೇ ಮದ್ಯ ಸೇವಿಸಿದ್ದಾರೆ. ಮೊಬೈಲ್‌ ದರೋಡೆ ಮಾಡಿ ಬೆದರಿಕೆ ಹಾಕಿ ಪರಾರಿಯಾಗಿದ್ದಾಗಿ ಸುರತ್ಕಲ್‌ ಪೊಲೀಸರಿಗೆ ದೂರು ನೀಡಲಾಗಿದೆ.

astr
- Advertisement -

Related news

error: Content is protected !!