- Advertisement -
- Advertisement -
ಸುಳ್ಯ: ಕೃಷಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬರು ನೀರು ಹಾಯಿಸುವ ವೇಳೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಜು. 27 ರಂದು ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನಲ್ಲಿ ನಡೆದಿದೆ.
ಮೃತರನ್ನು ಮುಳ್ಯ ಅಟ್ಲೂರು ನಿವಾಸಿ ಶಿವಪ್ಪ ಮೂಲ್ಯ ಎಂಬವರು (56) ಎಂದು ಗುರುತಿಸಲಾಗಿದೆ.
ರವಿಪ್ರಕಾಶ್ ಅಟ್ಲೂರುರ ತೋಟದಲ್ಲಿ ಕೃಷಿ ಕೆಲಸಕ್ಕೆಂದು ಶಿವಪ್ಪ ಮೂಲ್ಯ ಬಂದಿದ್ದರು. ಈ ವೇಳೆ, ಪಂಪ್ ಹೌಸ್ ನಿಂದ ನೀರು ಬಿಡುವ ವೇಳೆ ವಿದ್ಯುತ್ ತಾಗಿ ಅವರು ಎಸೆಯಲ್ಪಟ್ಟರು. ಅಲ್ಲೇ ಇದ್ದ ರವಿಪ್ರಕಾಶ್ ಹಾಗೂ ಇತರ ಕೆಲಸದವರು ಅವರನ್ನು ಜೀಪಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆ ವೇಳೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
- Advertisement -