Friday, April 26, 2024
spot_imgspot_img
spot_imgspot_img

ಸುಳ್ಯ: ತರಗತಿ ನಡೆಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತ್ಯು

- Advertisement -G L Acharya panikkar
- Advertisement -

ಸುಳ್ಯ : ಮದರಸ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ಳಾರೆಯ ನಡೆದಿದೆ.

ಮೃತಪಟ್ಟವರನ್ನು ಬೆಳ್ಳಾರೆ ತಾಲೂಕಿನ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ (51 ವ.) ಎಂದು ಗುರುತಿಸಲಾಗಿದೆ. ಜೂ.18 ರ ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ಹೋಗಿದ್ದು,ಅಲ್ಲಿ ಬೆಳಿಗ್ಗೆ 7.30 ಕ್ಕೆ ಮದರಸ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಘಾತದಿಂದ ಕುಸಿದು ಬಿದ್ದರು ಎನ್ನಲಾಗಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮಾಡಾವು ಎಂಬಲ್ಲಿಗೆ ತಲುಪಷ್ಟರಲ್ಲಿ ಅವರು ಮೃತಪಟ್ಟರು ಎನ್ನಲಾಗಿದೆ. ಕಳಂಜ ಬುಖಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಅವರ ಬದಲಿಗೆ ರಶೀದ್ ಮುಸ್ಲಿಯಾರ್ ಸೇವೆಯನ್ನು ಮಾಡುತ್ತಿದ್ದರು.
ಕಳಂಜ ಬುಖಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಅವರ ಬದಲಿಗೆ ರಶೀದ್ ಮುಸ್ಲಿಯಾರ್
ಸೇವೆಯನ್ನು ಮಾಡುತ್ತಿದ್ದರು.

ಜೂ.17 ರಂದು ತಂಬಿನಮಕ್ಕಿ ಮಸೀದಿ ಪರಿಸರದಲ್ಲಿ ಮೃತಪಟ್ಟ ಕೆ.ಪಿ ಅಬ್ದುಲ ಅವರ ಮನೆಗೆ ಭೇಟಿಮಾಡಿದ್ದರು. ಅಲ್ಲಿಂದ ನನಗೆ ಸ್ವಲ್ಪ ಎದೆನೋವಿದೆ ನಾನು ಬೆಳಿಗ್ಗೆ ಬರುತ್ತೆನೆ ಎಂದು ತಂಬಿನಮಕ್ಕಿ ಮನೆಗೆ ತೆರಳಿದ್ದರು. ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

vtv vitla
- Advertisement -

Related news

error: Content is protected !!