- Advertisement -
- Advertisement -
ಸುಳ್ಯ: ಮೂರನೇ ತರಗತಿ ವಿದ್ಯಾರ್ಥಿನಿ ಖುಷಿ(8) ಮಾರಣಾಂತಿಕ ಖಾಯಿಲೆಗೆ ತುತ್ತಾಗಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.
ಅರಂತೋಡು ಪೇಟೆಯಲ್ಲಿ ಹೊಟೇಲ್ ನಡೆಸುತ್ತಿರುವ ಯೋಗೀಶ್ ಎಂಬವರ ಮಗಳು ಖುಷಿ ಮೃತ ದುರ್ದೈವಿ.
ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಖುಷಿಯನ್ನು ಉಳಿಸಿಕೊಳ್ಳಲು ಅನೇಕ ದಾನಿಗಳು ಆಥಿ೯ಕ ಸಹಾಯ ಮಾಡಿದರು. ಅನೇಕ ಪ್ರಾರ್ಥನೆಗಳನ್ನೂ ಮಾಡಲಾಗಿತ್ತು. ಆದರೂ ಖುಷಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅರಂತೋಡು ಸರಕಾರಿ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದ ಖುಷಿ ತಂದೆ, ತಾಯಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
- Advertisement -