Thursday, May 2, 2024
spot_imgspot_img
spot_imgspot_img

ಸೋರುತ್ತಿದ್ದ ಮನೆಯನ್ನು ದುರಸ್ತಿ ಮಾಡಿ ಸೂರನ್ನು ನಿರ್ಮಿಸಿ ಕೊಟ್ಟ ಪೆರುವಾಯಿ ಸಂಘಟನೆ ಕಾರ್ಯಕರ್ತರು

- Advertisement -G L Acharya panikkar
- Advertisement -

ವಿಟ್ಲ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ತೀರ ಬಡತನದ ಕುಟುಂಬವಾದ ಪೆರುವಾಯಿ ಗ್ರಾಮದ ಕಡೆಂಗೋಡ್ಲು ಬಟ್ಯ ಮಾಯಿಲ ಎಂಬವರ ಮನೆ ದುರಸ್ತಿ ಕಾರ್ಯವನ್ನು ಮಾಡಲಾಯಿತು.

ಮಾಯಿಲ ಎಂಬವರ ಮನೆಯು ತೀರಾ ಹಳೆಯದ್ದಾಗಿದ್ದು, ಮನೆಯ ಮಹಡಿಯು ಮಳೆಗಾಲದಲ್ಲಿ ಸೋರುತ್ತಿತ್ತು. ವಾಸಿಸಲು ಯೋಗ್ಯವಲ್ಲದ ಈ ಮನೆಯನ್ನು ಸರಿಪಡಿಸಲು ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಈ ಕುಟುಂಬ ಸಂಘಟನೆ ಪ್ರಮುಖರಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.

ಈ ಬಡಕುಟುಂಬದ ನೋವಿಗೆ ತಕ್ಷಣ ಸ್ಪಂದಿಸಿದ ಸಂಘಟನೆಯ ಕಾರ್ಯಕರ್ತರು ಮನೆ ದುರಸ್ತಿ ಕಾರ್ಯವನ್ನು ಮಾಡಿ ಕೊಡುತ್ತೇವೆ ಎಂಬುದಾಗಿ ಭರವಸೆ ನೀಡಿದ್ದು, ಇದೀಗ ಮನೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ವಾಸಿಸಲು ಯೋಗ್ಯ ರೀತಿಯ ಸೂರನ್ನು ಕಲ್ಪಿಸಿಕೊಟ್ಟಿದ್ದಾರೆ.

- Advertisement -

Related news

error: Content is protected !!