Tuesday, March 19, 2024
spot_imgspot_img
spot_imgspot_img

ಹಲ್ಲು ಉಜ್ಜದೇ ಮುತ್ತಿಡಬೇಡ ಎಂದ ಪತ್ನಿ: ಕೋಪಗೊಂಡ ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ

- Advertisement -G L Acharya panikkar
- Advertisement -

ಕ್ಷುಲ್ಲಕ ವಿಚಾರಕ್ಕೆ ಪತಿ-ಪತ್ನಿಯ ನಡುವೆ ನಡೆದ ಜಗಳ ನಡೆದು ಗಂಡ ಹೆಂಡತಿಯನ್ನು ಕೊಲೆ ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಈ ಆತಂಕಕಾರಿ ಘಟನೆ ಕೇರಳದ ಮನ್ನಾರ್​ಕಾಡ್​ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ದೀಪಿಕಾ (28) ಎನ್ನಲಾಗಿದೆ. ಕೊಲೆಗೈದ ಗಂಡ ಅವಿನಾಶ್​ನನ್ನು ಬಂಧಿಸಲಾಗಿದೆ.

ಹಲ್ಲು ಉಜ್ಜದೇ ಮಗನಿಗೆ ಮುತ್ತು ಕೊಡಬೇಡಿ ಎಂದು ದೀಪಿಕಾ ಹೇಳಿದ ಮಾತಿಗೆ ಆಕೆಯೊಂದಿಗೆ ಅವಿನಾಶ್​ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ದೀಪಿಕಾ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾ ಅವರನ್ನು ನೆರೆಹೊರೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಅವಿನಾಶ್​ ಮಚ್ಚು ಹಿಡಿದು ದೀಪಿಕಾ ಪಕ್ಕದಲ್ಲಿ ನಿಂತಿದ್ದನ್ನು ಸ್ಥಳೀಯರು ನೋಡಿದ್ದಾರೆ. ಘಟನೆಯ ಬಳಿಕ ತಕ್ಷಣ ದೀಪಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ.

- Advertisement -

Related news

error: Content is protected !!