ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರೋಹಿತ್ ಸಿಪಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈ ಘಟನೆ ಧಾರವಾಡ ಕೃಷಿ ವಿವಿ ಹಾಸ್ಟೆಲ್ನಲ್ಲಿ ನಡೆದಿದೆ.
ಆತ ಸಾವನ್ನಪ್ಪಿರುವ ಕಾರಣ ಒಂದು ಕಡೆ ನಿಗೂಢವಾದರೆ, ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಇನ್ನೂ ನಿಗೂಢವಾಗಿದೆ. ರೋಹಿತ್ ಸಂಪೂರ್ಣ ಬಟ್ಟೆ ಬಿಚ್ಚಿ ಸಾವಿಗೆ ಶರಣಾಗಿದ್ದಾನೆ. ವಿಜಯ ನಗರ ಜಿಲ್ಲೆಯ ಕೊಟ್ಟೂರ ನಿವಾಸಿಯಾಗಿರುವ ರೋಹಿತ್, ಬಿಎಸ್ಪಿ ಕಮ್ಯುನಿಟಿ ಸೈನ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಆತ ಹಾಸ್ಟೆಲ್ನಲ್ಲಿ ವಾಸವಾಗಿದ್ದು, ಭಾನುವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ.
ನಗ್ನವಾಗಿ ಸಾವಿಗೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ನಡುವೆ, ಮನೆಯವರು, ಕುಟುಂಬಿಕರು ಬಂದ ಮೇಲೆ ಶವವನ್ನು ಕೆಳಗೆ ಇಳಿಸಲಾಗಿದೆ. ಮೈಮೇಲಿದ್ದ ಬಟ್ಟೆಯನ್ನು ತನ್ನ ರೂಂ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಹಾಕಿದ್ದಾನೆ. ಈ ರೀತಿ ಯಾಕೆ ಮಾಡಿದ ಎನ್ನುವುದು ನಿಗೂಢವಾಗಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣಿ ಪೊಲೀಸರು ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.