Saturday, June 28, 2025
spot_imgspot_img
spot_imgspot_img

ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ

- Advertisement -
- Advertisement -

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ A.I.T ಇಲ್ಲಿ ದ್ವೀತಿಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕಿಶೋರ್ ಎಂಬವರು ಹಾಸ್ಟೆಲ್ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಈಶ ಯಮುನಾ ದಂಪತಿಯ ಪುತ್ರ. ಕಿಶೋರ್ ಎಸ್​.ಎಸ್​.ಎಲ್​.ಸಿ ಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದು ಚನ್ನರಾಯಪಟ್ಟಣಕ್ಕೆ ಹತ್ತಿರವಿರುವ ಚಿಕ್ಕಮಗಳೂರು ನಗರದ ಪ್ರತಿಷ್ಠಿತ A.I.T ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕೋರ್ಸ್​ ಮಾಡುತ್ತಿದ್ದನು.

ಕಿಶೋರ್ ಪೋಷಕರು ಹೇಳುವಂತೆ ಮೈತುಂಬ ಸಾಲ ಮಾಡಿದ್ದು, ವಿದ್ಯಾರ್ಥಿಗಳ ಜೊತೆಗೂ ಸಾಲ ಕೇಳಿದ್ದನಂತೆ, ವಿದ್ಯಾರ್ಥಿಗಳಿಗೆ ಸಾಲ ಯಾಕೆ ಬೇಕು.? ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಒಳಗೆ ನಡೆಯುತ್ತ ಇರೋದೆ ಬೇರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಕಾಲೇಜಿನ ಮೇಲೆ ಸಾಕಷ್ಟು ಆರೋಪ ಬಂದಿತ್ತು, ನಾವು ಈ‌ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಕಾಲೇಜು ಪ್ರಿನ್ಸಿಪಾಲ್ ಜಯರಾಮ್ ಸಮಜಾಯಿಷಿ ನೀಡಿದ್ದಾರೆ.

ವಿದ್ಯಾರ್ಥಿಯ ಸಾವು ಅನುಮಾನಾಸ್ಪದವಾಗಿದ್ದು ಪ್ರತಿಷ್ಠಿತ A.I.T ಕಾಲೇಜಿನ ಸುತ್ತ ನೂರೆಂಟು ಅನುಮಾನಗಳನ್ನ ಹುಟ್ಟು ಹಾಕಿದೆ. ಕ್ಯಾಂಪಸ್ ಒಳಗೆ ನಡೆಯುತ್ತಿರುವ ಡ್ರಗ್ಸ್, ಬಡ್ಡಿ ಮಾಫಿಯಾದ ಕರಿ ನೆರಳಿಗೆ ಸಿಲುಕಿ‌ ವಿದ್ಯಾರ್ಥಿ ಬಲಿಯಾದನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಮಗಳೂರು ನಗರ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!