- Advertisement -
- Advertisement -
ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಆಗಸ್ಟ್ 14 ರಂದು ಬೃಹತ್ ವಾಹನ ಜಾಥ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1947 ರ ಆಗಸ್ಟ್ 14ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಕಳೆದು ಹೋದ ಭಾಗಗಳನ್ನು ಮತ್ತೆ ಒಂದುಗೂಡಿಸುವ ಅಂಗವಾಗಿ ಜನಜಾಗೃತಿಗಾಗಿ ’ಅಖಂಡ ಭಾರತ ಸಂಕಲ್ಪ ದಿನ’ – ಬೃಹತ್ ವಾಹನ ಜಾಥ ನಡೆಯಲಿದೆ.
ವೀರಕಂಬದ ಶಾರದ ಭಜನಾ ಮಂದಿರ, ಮಾಣಿಯ ರಾಜರಾಜೇಶ್ವರಿ ಭಜನಾ ಮಂದಿರ, ಪಾಣೆ ಮಂಗಳೂರು ಸತ್ಯದೇವತಾ ಗುಡಿಯ ಬಳಿಯಿಂದ ಏಕ ಕಾಲಕ್ಕೆ ಬೃಹತ್ ವಾಹನ ಜಾಥ ಸಂಜೆ 3 ಗಂಟೆಗೆ ಸರಿಯಾಗಿ ನಡೆದು ಬಳಿಕ ಸಂಜೆ 4 ಗಂಟೆಗೆ ಕಲ್ಲಡ್ಕ ಶ್ರೀ ರಾಮ ಮಂದಿರ ಬಳಿ ಸಭಾ ಕಾರ್ಯಕ್ರಮ ನಡೆಯಲಿದೆ.
- Advertisement -