- Advertisement -
- Advertisement -
11 ವರ್ಷದ ಬಾಲಕಿಯ ಮೇಲೆ ಚರ್ಚ್ ಪಾದ್ರಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಉತ್ತರ ಪ್ರದೇಶದ ಚಾಂದಿನಗರ ಗ್ರಾಮದ ಚರ್ಚ್ವೊಂದರ ಪಾದ್ರಿಯನ್ನು ಬಂಧಿಸಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ, ಆಕೆಯ ಮಗಳು ಸೈಕ್ಲಿಂಗ್ಗಾಗಿ ಚರ್ಚ್ಗೆ ಹೋಗಿದ್ದ ವೇಳೆ ಪಾದ್ರಿ ಆಲ್ಬರ್ಟ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಜಾದೂನ್ ತಿಳಿಸಿದ್ದಾರೆ.
ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಆದರೆ, ಬಾಲಕಿ ಮನೆಗೆ ಬಂದ ಬಳಿಕ ತನಗಾದ ಸಂಕಷ್ಟವನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
- Advertisement -