- Advertisement -
- Advertisement -



ಬೆರಿಪದವು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಿದ್ಯಾಭ್ಯಾಸ ಸೇವಾ ಯೋಜನೆಯ ಅಂಗವಾಗಿ ಓಂ ಶ್ರೀ ಬೆರಿಪದವು ಸಹಭಾಗಿತ್ವದಲ್ಲಿ ಉಚಿತ ಪುಸ್ತಕ ವಿತರಣೆ ಸಮಾರಂಭ ಮೇ. 31 ನೇ ಆದಿತ್ಯವಾರ ನಡೆಯಿತು.

ಸದಾನಂದ ಆಳ್ವ ಪೆರ್ವೊಡಿಬೀಡು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಮಾನಾಥ ಭಂಡಾರಿ ಪೆರ್ವೊಡಿಬೀಡು, ಬಿ ಕೆ ರಾಮಕೃಷ್ಣ ಬಲ್ಲಾಳ್ (ವಾರ್ಡು ಸದಸ್ಯರು), ಪುರಂದರ ಶೆಟ್ಟಿ ಬಳ್ಳೂರು ಬಾಯಾರುಬೀಡು, ದೇವದಾಸ್ ಬೆರಿಪದವು (ಅಧ್ಯಕ್ಷರು ಓಂ ಶ್ರೀ ಬೆರಿಪದವು) ಉಪಸ್ಥಿತರಿದ್ದರು.ದೇವದಾಸ್ ಬೆರಿಪದವು ಅವರು ಪ್ರಾರ್ಥಿಸಿದರು.

ಮಂದಿರದ ಕಾರ್ಯದರ್ಶಿ ರಾಘವ ಎನ್ ಸ್ವಾಗತಿಸಿದರು ಶಿವಪ್ರಸಾದ್ ಆಳ್ವ ಪೆರ್ವೋಡಿಬೀಡು ಧನ್ಯವಾದವಿತ್ತರು.
- Advertisement -








