Saturday, June 28, 2025
spot_imgspot_img
spot_imgspot_img

ವಿಟ್ಲ: (ಜು.23) ಪುತ್ತಿಲ ಪರಿವಾರ ಮಾಮೇಶ್ವರ ಘಟಕ ಇದರ ವತಿಯಿಂದ ಕೆಸರ್‌ಡೊ೦ಜಿ ದಿನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಪುತ್ತಿಲ ಪರಿವಾರ ಮಾಮೇಶ್ವರ ಘಟಕ ಇದರ ವತಿಯಿಂದ ಕೆಸರ್‌ಡೊ೦ಜಿ ದಿನ ಕಾರ್ಯಕ್ರಮವು ಜು.23ರಂದು ಮಂಗಳಪದವು, ಮಚ್ಚಗದ್ದೆಯಲ್ಲಿ ನಡೆಯಲಿದೆ.

ದೀಪೋಜ್ವಲನೆ ಹಾಗೂ ಉದ್ಘಾಟನೆ ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ಕೇಶವಯ್ಯ ಇಂದ್ರಪಡ್ಪು, ಕೃಷ್ಣಪ್ಪ ಪೂಜಾರಿ ಮಚ್ಚ, ವಿಟ್ಲ ಪಟ್ಟಣ ಪಂಚಾಯತ್‌ ಸದಸ್ಯೆ ಲತಾಅಶೋಕ್‌ ಪೂಜಾರಿ, ಪ್ರಗತಿಪರ ಕೃಷಿಕ ರೋಹಿತಾಶ್ವ ಭಂಗ ಮುಡಿಮಾರು, ಶ್ರೀ ಉಮಾಮಹೇಶ್ವರ ವಿಶ್ವಸ್ಥ ಮಂಡಳಿ ಮಾಮೇಶ್ವರ ಅಧ್ಯಕ್ಷ ವೀರಪ್ಪ ಗೌಡ ರಾಯರಬೆಟ್ಟು ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮ ಅಧ್ಯಕ್ಷತೆಯನ್ನು ಅರುಣ್‌ ಕುಮಾರ್‌ ಪುತ್ತಿಲ ವಹಿಸಲಿದ್ದು, ದಿಕ್ಸೂಚಿ ಭಾಷಣವನ್ನು ಖ್ಯಾತ ವಾಗ್ಮಿ ಕೃಷ್ಣ ಉಪಾಧ್ಯಾಯ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್‌, ಪುತ್ತೂರು ವೈದ್ಯರಾದ ಸುರೇಶ್‌ ಪುತ್ತೂರಾಯ, ಪುತ್ತಿಲ ಪರಿವಾರ ಕೇಂದ್ರ ಸಮಿತಿ ಉಪಾಧ್ಯಕ್ಷ ರಘುರಾಮ ರೈ, ವಿಟ್ಲ ವೈದ್ಯರಾದ ಡಾ. ಅರವಿಂದ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಬೆಂಗಳೂರಿನ ಉದ್ಯಮಿ ರಾಜಶೇಖರ್‌ ಕೋಟ್ಯಾನ್‌, ಮಂಗಳೂರು ಹಿಂದೂ ಯುವ ನಾಯಕ ಲೋಕೇಶ್‌ ಕೋಡಿಕೆರೆ, ಪುತ್ತಿಲ ಪರಿವಾರ ಸಮಿತಿಯ ಅಧ್ಯಕ್ಷ ಅನಿಲ್‌ ತೆಂಕಿಲ, ಶ್ರೀ ಲಕ್ಷ್ಮೀ ನರಸಿಂಹ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಸದಾಶಿವ ಆಚಾರ್ಯ, ಮಂಗಳೂರು ಯುವ ನ್ಯಾಯವಾದಿ ಮಿತೇಶ್‌ ಪೂಜಾರಿ, ಪುತ್ತಿಲ ಪರಿವಾರ ವಿಟ್ಲ ನಗರ ಅಧ್ಯಕ್ಷ ಮೋಹನ ಸೇರಾಜೆ, ಮಂಗಳೂರು ಯುವ ನ್ಯಾಯವಾದಿ ಶಿವಾನಂದ ವಿಟ್ಲ, ಚಿತ್ತರಂಜನ್‌ ನೆಕ್ಕಿಲಾರು ಯುವ ಉದ್ಯಮಿ ಮಂಗಳಪದವು, ವಿಟ್ಲ ಪಟ್ಟಣ ಪಂಚಾಯತ್‌ ಸದಸ್ಯರಾದ ಕರುಣಾಕರ ನಾಯ್ತೋಟು, ಡೀಕಯ್ಯ ಸುರುಳಿಮೂಲೆ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!