Saturday, June 28, 2025
spot_imgspot_img
spot_imgspot_img

ವಿಟ್ಲ: ಜಮೀನು ವಿವಾದ; ತಂಡದಿಂದ ವೃದ್ಧನ ಮೇಲೆ ಹಲ್ಲೆಗೆ ಯತ್ನ, ಕೃಷಿ ನಾಶ, ಮನೆಗೆ ಕಲ್ಲು ತೂರಾಟ…!

- Advertisement -
- Advertisement -

ವಿಟ್ಲ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ನಾರ್ಶ ಅಲದಡಿ ಎಂಬಲ್ಲಿ ನಡೆದಿದೆ.

ವೃದ್ಧ ಇಸ್ಮಾಯಿಲ್ ಮತ್ತು ಆತನ ಪುತ್ರನ ಮೇಲೆ ನಾರ್ಶ ನಿವಾಸಿ ಈಚು ಯಾನೆ ಇಸುಬು ಮತ್ತು ಆತನ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ನಡೆಸಿದ್ದಲ್ಲದೇ, ಮನೆಗೆ ಕಲ್ಲು ತೂರಾಟ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಈ ಪ್ರಕರಣ ವಿಟ್ಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!