Saturday, June 28, 2025
spot_imgspot_img
spot_imgspot_img

ವಿಟ್ಲ: (ಸೆ.25) ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಸೇವಾಸಂಘ(ರಿ) ಕುಂಡಡ್ಕ- ಬೇರಿಕೆ ಇದರ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಸೆ.25ರಂದು ಬೆಳಗ್ಗೆ 9.00ಗಂಟೆಗೆ ನಡೆಯಲಿದೆ.

ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ರಿ. ಕುಂಡಡ್ಕ, ಬೇರಿಕೆ ಇದರ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ವಹಿಸಲಿದ್ದಾರೆ. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರಿನ ಮಹಾಬಲ ಸ್ವಾಮೀಜಿ ಹಾಗೂ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರ ಕುಕ್ಕಾಜೆಯ ಕೃಷ್ಣ ಗುರೂಜಿ ಆರ್ಶೀವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್‌ ಕುಮಾರ್ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಕುಂಡಡ್ಕ ಬೇರಿಕೆ ಇದರ ಅಧ್ಯಕ್ಷ ಡಾ. ರಾಜಾರಾಮ್‌ ಕೆ.ಬಿ, ಉದ್ಯಮಿ ಪುರುಷೋತ್ತಮ ಕಾರಾಜೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ರಿ., ಗಾನದಪಡ್ಪು ಬಿ.ಸಿ.ರೋಡು ಇದರ ಅಧ್ಯಕ್ಷ ಬಿ. ಸಂಜೀವ ಪೂಜಾರಿ, ‘ಗುರುಕೃಪಾ’, ಅಕ್ಷಯ ಕಾಲೇಜು ಪುತ್ತೂರಿನ ಅಧ್ಯಕ್ಷರು ಜಯಂತ ನಡುಬೈಲು,ಲಯನ್ಸ್ ಜಿಲ್ಲೆ 317-ಡಿ ಪೂರ್ವ ರಾಜ್ಯಪಾಲರು ಲ|ಡಾ. ಗೀತಾ ಪ್ರಕಾಶ್‌, ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಸಂಜೀವ ಪೂಜಾರಿ,ಉದ್ಯಮಿ ಶ್ರೀನಿವಾಸ ಪೂಜಾರಿ ಶ್ರೀ ಗುರುಜ್ಯೋತಿ ಶಾಮಿಯಾನ ಮೆಲ್ಕಾರ್‌, ಪ್ರಗತಿಪರ ಕೃಷಿಕ ಸುಧಾಕರ ಪೂಜಾರಿ ಕೇಪು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!