- Advertisement -
- Advertisement -
ವಿಟ್ಲ ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಜನರ ಪ್ರೀತಿಗೆ ಮನ್ನಣೆ ಪಡೆದ ರಾಜ್ ಕುಮಾರ್ ಮತ್ತು ರಾಜ್ ಇವರಿಗೆ ಮಾತಾಶ್ರೀ ಇಂಜಿನಿಯರಿಂಗ್ ವರ್ಕ್ಸ್ ಮಂಗಲಪದವು ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮೂಲತಃ ವಿಜಯಪುರ ಜಿಲ್ಲೆಯಿಂದ ಬಂದು ವಿಟ್ಲದಲ್ಲಿ ತಮ್ಮ ಕರ್ತವ್ಯವನ್ನು ಮಾಡುವುದರ ಜೊತೆಗೆ ಇಲ್ಲಿಯ ಜನರ ಪ್ರೀತಿಗೆ ಪಾತ್ರರಾದ ರಾಜ್ ಕುಮಾರ್ ಮತ್ತು ರಾಜ್ ರವರು ಇದೀಗ ತಮ್ಮ ಊರಿಗೆ ವರ್ಗಾವಣೆ ಗೊಳ್ಳುತ್ತಿರುವ ಸಂದರ್ಭದಲ್ಲಿ ಅವರನ್ನು ಗೌರವಿಸಿ ಕಳಿಸುವುದು ನಮಗೆ ಸಂತಸ ತಂದಿದೆ ಎಂದು ಮಾತಾಶ್ರೀ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕರಾದ ಪುರಂದರ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -