- Advertisement -
- Advertisement -
ವಿಟ್ಲ: ಕಳೆದ ಮೂರು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ, ವಿಟ್ಲ ಕಸಬಾ ಗ್ರಾಮದ ನೀರಕಣಿ – ಸೇರಾಜೆ ರಸ್ತೆಯ (ಸಂಕದಬಳಿ) ಅಪಾಯಕಾರಿ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಒಂದು ಬದಿ ಸಂಪೂರ್ಣವಾಗಿ ಜರಿದು ಅಪಾಯದ ಮುನ್ಸೂಚನೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆ ಸಂಪೂರ್ಣವಾಗಿ ಸಂಪರ್ಕವನ್ನು ಕಡಿದುಕೊಂಡು ಸಾರ್ವಜನಿಕರಿಗೆ ಸಂಚರಿಸಲು ಬಹಳ ತೊಂದರೆಗಳು ಎದುರಾಗುವ ಸಂಭವವಿದೆ.
ಸಧ್ಯಕ್ಕೆ ಘನ ವಾಹನಗಳು ಸಂಚರಿಸಿದರೆ ಇನ್ನಷ್ಟು ಜರಿದು ಬೀಳುವ ಪರಿಸ್ಥಿತಿಯಲ್ಲಿರುವುದರಿಂದ, ಘನವಾಹನ ಸಂಚಾರವನ್ನು ಈ ರಸ್ತೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಿ ಸಂಚಾರವನ್ನು ತಾತ್ಕಾಲಿಕ ತಡೆಯನ್ನು ನೀಡಲಾಗಿದೆ. ಪರಿಸ್ಥಿತಿಯನ್ನು ಈಗಾಗಲೇ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ಈಗಾಗಲೇ ಬಂದು ಸ್ಥಳ ಮರುಪರಿಶೀಲನೆ ನಡೆಸಿದ್ದಾರೆ.
- Advertisement -