Saturday, June 28, 2025
spot_imgspot_img
spot_imgspot_img

ಹುಟ್ಟುಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿಗೆ ಬಲೂನ್ ತಗುಲಿ ಬೆಂಕಿ: ನಾಲ್ವರು ಮಕ್ಕಳಿಗೆ ಗಂಭೀರ ಗಾಯ

- Advertisement -
- Advertisement -

ಹುಟ್ಟುಹಬ್ಬದ ಆಚರಣೆ ವೇಳೆ ಹೀಲಿಯಂ ಬಲೂನ್ ವಿದ್ಯುತ್‌ ತಂತಿಗೆ ತಗುಲಿ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು ಓರ್ವ ವ್ಯಕ್ತಿ ಹಾಗೂ ನಾಲ್ವರು ಮಕ್ಕಳಿಗೆ ತೀವ್ರ ಗಾಯಗಳಾಗಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಲ್ಲೂರಿನಲ್ಲಿ ವರದಿಯಾಗಿದೆ.

ಧ್ಯಾನ್ ಚಂದ(7), ಇಶಾನ್(8), ಸಂಜಯ್(8), ಸೊಹಿಲ್ (3) ಗಾಯಾಳು ಮಕ್ಕಳು. ಇನ್ನು ಘಟನೆಯಲ್ಲಿ ವಿಜಯ್ ಆದಿತ್ಯ ಕುಮಾರ್ (44) ಎಂಬವರಿಗೂ ಕೂಡ ಗಾಯಳಾಗಿದ್ದು, ಗಾಯಾಳುಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಎಚ್​ಎಎಲ್​ನಲ್ಲಿ ಉದ್ಯೋಗಿಯಾಗಿರುವ ವಿಜಯ್ ಆದಿತ್ಯಕುಮಾರ್ ಎಂಬುವರ ಒಂದು ವರ್ಷದ ಮಗನ ಹುಟ್ಟುಹಬ್ಬ ಆಚರಣೆಗೆಂದು ಹೀಲಿಯಂ ಬಲೂನ್‌ಗಳನ್ನು ( ಗ್ಯಾಸ್ ಬಲೂನ್​) ಮೆಟ್ಟಿಲುಗಳ ಮೇಲೆ ತೆಗೆದುಕೊಂಡು ಹೊಗುತಿದ್ದರು. ಹೋಗುವ ವೇಳೆಯಲ್ಲಿ ಮನೆಯ ಮುಂದಿನ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡು ಅವಘಡ ಉಂಟಾಗಿದೆ. ಹುಟ್ಟುಹಬ್ಬಕ್ಕೆ ಅಕ್ಕಪಕ್ಕದ ಮನೆಯ ಮಕ್ಕಳನ್ನು ಕರೆಯಲಾಗಿತ್ತು ಎಂದು ಹೇಳಲಾಗಿದೆ.

- Advertisement -

Related news

error: Content is protected !!