Sunday, June 29, 2025
spot_imgspot_img
spot_imgspot_img

ಕುಸಿದು ಬಿದ್ದು ಯುವಕ ಮೃತ್ಯು..!

- Advertisement -
- Advertisement -

ಅಸ್ವಸ್ಥಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅನಿವಾಸಿ ಪುತ್ರ ಕುಸಿದು ಬಿದ್ದು ಮೃತಪಟ್ಟ ಘಟನೆ ತ್ರಿಕರಿಪುರದಲ್ಲಿ ನಡೆದಿದೆ.

ಮೃತಪಟ್ಟ ಯುವಕ ವಲಿಯಪರಂ ಹನ್ನೆರಡರ ಎಂ.ಕೆ.ಅಹ್ಮದ್ ಮತ್ತು ನೂರ್ಜಹಾನ್ ದಂಪತಿಯ ಪುತ್ರ ಅಲ್ವಾಫ್ (26) ಎಂದು ಗುರುತಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದರೂ ಆತನ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹವನ್ನು ಮನೆಗೆ ತಂದು ಬಳಿಕ ವಲಿಯಪರಂ ಜುಮಾ ಮಸೀದಿ ಕಬರಸ್ಯನದಲ್ಲಿ ದಫನ ನಡೆಸಲಾಯಿತು. ವಿದೇಶದಲ್ಲಿದ್ದ ಅಲ್ತಾಫ್ ತನ್ನ ಮದುವೆಗೆ ಸಂಬಂಧಿಸಿದ ಕಾರಣಗಳಿಗಾಗಿ ವಾರದ ಹಿಂದೆ ಊರಿಗೆ ಬಂದಿದ್ದರು.

- Advertisement -

Related news

error: Content is protected !!