ಬೆಳ್ತಂಗಡಿ: ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಹಳೆ ಪೇಟೆ ಎಂಬಲ್ಲಿರುವ ಸುರೇಶ್ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್/ ಐಶ್ವರ್ಯಾ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್ ನಲ್ಲಿ ನಡೆದಿದೆ.
ಆರೋಪಿಗಳನ್ನು ಬದ್ನಾಳ್ ಕಂಪೌಂಡ್, ಅರಳೇ ಪೇಟೆ, ತುಮಕೂರು ರೇಣುಕಾ ಪ್ರಸಾದ್ (29), ನಿಟ್ಟೆ ಗ್ರಾಮ, ಕಾರ್ಕಳ ರಾಜೇಶ್ ಮೋಹನ್ ನಾಯರ್ (34), ನೂರಾಲ್ ಬೆಟ್ಟು ಗ್ರಾಮ, ಕಾರ್ಕಳ ನಿತಿನ್ ಕುಮಾರ್ (28) ಎಂದು ಗುರುತಿಸಲಾಗಿದದೆ.
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಹಳೆ ಪೇಟೆ ಎಂಬಲ್ಲಿರುವ ಸುರೇಶ್ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್/ ಐಶ್ವರ್ಯಾ ಲಾಡ್ಜ್ , ಬೋರ್ಡಿಂಗ್ & ಲಾಡ್ಜ್ಂಗ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಬಿ.ಜಿ.ಸುಬ್ಬಾಪೂರ ಮಠ್,ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆರವರು ಠಾಣಾ ಸಿಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರಿಕೆಗೆ ಕೊಟ್ಟು ಆರೋಪಿಗಳ ವಿರುದ್ದ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/24 ಕಲಂ:3,4,5,5 (d) ITP ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.