Sunday, June 29, 2025
spot_imgspot_img
spot_imgspot_img

ನೇಣು ಬಿಗಿದು ಯುವಕ ಆತ್ಮಹತ್ಯಗೆ ಶರಣು..!

- Advertisement -
- Advertisement -

ಮುಳ್ಳೇರಿಯ: ಯುವ ಉದ್ಯಮಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳ್ಳೇರಿಯದಲ್ಲಿ ನಡೆದಿದೆ.

ಮೃತಪಟ್ಟ ಯುವಕ ನಾಟೆಕಲ್ಲು ಬಳಿಯ ಬೆಳ್ಳೂರಡ್ಕ ದಿ.ಶ್ರೀಧರ ಎಂಬವರ ಪುತ್ರ ಕೀರ್ತನ್ (27) ಎಂದು ಗುರುತಿಸಲಾಗಿದೆ.

ಇವರು ಮುಳ್ಳೇರಿಯಾದಲ್ಲಿ ಕಾರು ವಾಷಿಂಗ್ ಹಾಗೂ ಸಿರಾಮಿಕ್ ಕೋಟಿಂಗ್ ಉದ್ಯೋಗ ನಡೆಸುತ್ತಿದ್ದರು. ಮಧ್ಯಾಹ್ನದ ವೇಳೆ ಮನೆಯಲ್ಲಿದ್ದ ಕೀರ್ತನ್ ಬೆಡ್‌ ರೂಂಗೆ ತೆರಳಿದ್ದು, ದೀರ್ಘ ಹೊತ್ತಾದರೂ ಹೊರಗೆ ಬಂದಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಸಹೋದರ ಬಾಗಿಲು ತೆರೆದು ನೋಡಿದಾಗ ಕೀರ್ತನ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಗ್ಗ ತುಂಡರಿಸಿ ಮುಳ್ಳೇರಿಯದ ಆಸ್ಪತ್ರೆಗೆ ಕರೆದೊಯ್ಯಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ

- Advertisement -

Related news

error: Content is protected !!