ಪುತ್ತೂರು: ಕಬಕದ ಶ್ರೀ ಮಹಾದೇವಿ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಅ.21ರಂದು ನಿರಾಮಯ ಮೋದಿಕೇರ್ ಡಿಸ್ಟ್ರಿಬ್ಯೂಟರ್ ಪಾಯಿಂಟ್ ಶುಭಾರಂಭಗೊಂಡಿತು.
ಸಂಸ್ಥೆಯನ್ನು ರಮೇಶ್ ಭಟ್ ಬೈಪದವು ಉದ್ಘಾಟಿಸಿದರು. ಮೋದಿಕೇರ್ ನ ರೋಯಲ್ ಬ್ಲಾಕ್ ಡೈಮಂಡ್ ಡೈರೆಕ್ಟರ್ ತೇಜುಕಿರಣ್ ಮೋದಿಕೇರ್ ನ ಪ್ರಾಡೆಕ್ಟ್ ಗಳ ಬಗ್ಗೆ ಮಾಹಿತಿ ನೀಡಿದರು. ಕೃಷ್ಣಪ್ಪ ಪೂಜಾರಿ(ಗುರುಸ್ವಾಮಿ) ಪಾಂಡೇಲು ಹಾಗೂ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು ರವರು ಪ್ರಥಮ ಗ್ರಾಹಕರಾಗಿ ಖರೀದಿಸಿದರು. ಶ್ರೀ ಮಹಾದೇವಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾದ ಜಯರಾಮ ನೆಕ್ಕರೆರವರು ಪ್ರಥಮ ಗ್ರಾಹಕರಾಗಿ ನೋಂದವಣಿ ನಡೆಸಿದರು.
ಮೋದಿಕೇರ್ ನ ಹಿರಿಯ ನಿರ್ದೇಶಕರಾದ ಕೃಷ್ಣ ಕುಮಾರ್ ಅತ್ರಿಜಾಲು, ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಈಶ್ವರ ನಾಯ್ಕ್, ದಯಾನಂದ ಉಜಿರೆಮಾರು, ರಮೇಶ್ ಆಳ್ವಾ ಇಡ್ಕಿದು, ಪ್ರಶಾಂತ್ ಶೆಟ್ಟಿ ಬರೆ, ಕೇಶವ ಪಾಂಡೇಲು, ನವೀನ್ ಪಾಂಡೇಲು, ಮಹೇಶ್ ಕೊಂತ್ಯೊಟ್ಟು, ಇಡ್ಕಿದು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಸುಂದರ ಗೌಡ ಪಾಂಡೇಲು, ಕೊಡಿಪಾಡಿ ಗ್ರಾ.ಪಂ. ಮಾಜಿ ಸದಸ್ಯ ಗಿರಿಧರ ಗೌಡ ಗೋಮುಖ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಕೆ.ಟಿ.ವೆಂಕಟೇಶ್ವರ ನೂಜಿರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಾಲಕರ ಪತ್ನಿ ಶ್ವೇತರವರು ವಂದಿಸಿದರು.