![G L Acharya G L Acharya](https://vtvvitla.com/wp-content/uploads/2023/07/gl_acharya.jpeg)
![panikkar panikkar](https://vtvvitla.com/wp-content/uploads/2020/07/panikkar.jpeg)
![](https://vtvvitla.com/wp-content/uploads/2021/10/indane-gas-1024x606.jpg)
![](https://vtvvitla.com/wp-content/uploads/2020/07/Datta-Kripa-Finace-Logo-for-ADVT-5.jpg)
![](https://vtvvitla.com/wp-content/uploads/2024/04/sanvi-creative-893x1024.jpg)
![](https://vtvvitla.com/wp-content/uploads/2024/04/vigneshwara-new-683x1024.jpeg)
ವಿಟ್ಲ : ದ್ವಿಚಕ್ರ ವಾಹನವನ್ನು ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಕಸಬಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಕೊಡಂಗಾಯಿ ಅಂಚೆ, ವಿಟ್ಲ ಪಡ್ನೂರು ಗ್ರಾಮ, ವರದರಾಜ್ ಎಂಬವರು ದಿನಾಂಕ:18-05-2024 ರಂದು ಸಂಜೆ, ವಿಟ್ಲ ಕಸಬಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ರಸ್ತೆಬದಿಯಲ್ಲಿ ನಿಂತುಕೊಂಡಿರುವಾಗ, ಆರೋಪಿ ಎಸ್ ಮಹಮ್ಮದ್ ಎಂಬವರು KA-19-HK-8955 ನೇ ನೋಂದಣಿ ನಂಬ್ರದ ದ್ವಿಚಕ್ರ ವಾಹನವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ವರದರಾಜ್ರಿಗೆ ಡಿಕ್ಕಿ ಹೊಡೆಸಿರುತ್ತಾರೆ.
ಪರಿಣಾಮ ವರದರಾಜ್ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಪರಿಚಯಸ್ಥರು, ಗಾಯಾಳುವನ್ನು ಉಪಚರಿಸಿದ್ದಾರೆ. ಆಗ ವರದರಾಜ್ ರಿಗೆ ನೋವು ಕಡಿಮೆಯಿದ್ದುದರಿಂದ ಅವರು ಮನೆಗೆ ಹೋಗಿದ್ದು, ದಿನಾಂಕ 19-05-2024 ರಂದು ಅಫಘಾತದಿಂದ ಉಂಟಾದ ನೋವು ಜಾಸ್ತಿಯಾದ ಕಾರಣ ವಿಟ್ಲದಲ್ಲಿರುವ ಬೆನಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ, ನಂತರ ದಿನಾಂಕ 20-05-2024 ರಂದು ಮತ್ತೆ ನೋವು ಉಲ್ಬಣಗೊಂಡ ಕಾರಣ ಪುತ್ತೂರು ಆದರ್ಶ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 90/2024, ಕಲಂ: 279,337 ಬಾಧಂಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.