


ಉರಿಮಜಲು: ವಿವಿಧ ಕ್ರೀಡೆಗಳಿಗೆ ಅನುಗುಣವಾದ ರಾಯಲ್ ಪ್ಲೇ ಸ್ಟೇಡಿಯಂ (play smart) ವಿಟ್ಲ ಉರಿಮಜಲು ಇಲ್ಲಿನ ಲಕ್ಷ್ಮೀ ಫ್ಯೂಯೆಲ್ ಹತ್ತಿರದಲ್ಲಿ ಮೇ.27 ನೇ ಸೋಮವಾರದಂದು ಶುಭಾರಂಭಗೊಳ್ಳಲಿದೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ನಡೆಯುವ ಈ ಕಾರ್ಯಕ್ರಮವನ್ನು ಯು ಟಿ ಖಾದರ್ ಸಭಾಧ್ಯಕ್ಷರು ಕರ್ನಾಟಕ ಸರಕಾರ ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದೇವದಾಸ್ ಕಾಪಿಕಾಡ್ ತುಳು ಚಲನಚಿತ್ರ ನಟ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಎಂ ಎಸ್ ಮಹಮ್ಮದ್ ಮಾಜಿ ಉಪಾಧ್ಯಕ್ಷರು ದ ಕ ಜಿಲ್ಲಾ ಪಂಚಾಯತ್, ಎಚ್ ನಾಗರಾಜ್ ಸರ್ಕಲ್ ಇನ್ಸ್ಪೆಕ್ಟರ್ ವಿಟ್ಲ ಪೊಲೀಸ್ ಠಾಣೆ, ಪದ್ಮನಾಭ ಸಪಲ್ಯ, ಉಪಾಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್, ಮೋಹನ್ ಭಟ್ ಮಾಲಕರು ಲಕ್ಷ್ಮೀ ಫ್ಯೂಯೆಲ್ ಉರಿಮಜಲು, ಅರುಣ್ ವಿಟ್ಲ ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ವಿ ಕೆ ಎಂ ಅಶ್ರಫ್ ಸದಸ್ಯರು ಪಟ್ಟಣ ಪಂಚಾಯತ್, ಅಶ್ರಫ್ ಮಹಮ್ಮದ್ ಪೊನ್ನೊಟ್ಟು ಅಧ್ಯಕ್ಷರು ಕೇಂದ್ರ ಜುಮಾ ಮಸೀದಿ ವಿಟ್ಲ, ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು, ಅಧ್ಯಕ್ಷರು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು, ರಶೀದ್ ವಿಟ್ಲ ಅಧ್ಯಕ್ಷರು ಜಂಯತುಲ್ ಫಲಾಹ್ ಬಂಟ್ವಾಳ, ಶಾಕೀರ್ ಅಳಕೆಮಜಲು ಪ್ರಧಾನ ಕಾರ್ಯದರ್ಶಿ ಡಿ ಗ್ರೂಪ್ ವಿಟ್ಲ, ಸುಧಾಕರ್ ಶೆಟ್ಟಿ ಅಧ್ಯಕ್ಷರು ಸೇವಾ ಸಹಕಾರಿ ಬ್ಯಾಂಕ್ ಇಡ್ಕಿದು ಉರಿಮಜಲ್, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು ಉದ್ಯಮಿ ಬೆಂಗಳೂರು, ರಾಮ್ ದಾಸ್ ಶೆಟ್ಟಿ ಮಾಲಕರು ವಿಟಿವಿ ವಿಟ್ಲ, ಅಬೂಬಕರ್ ಪುತ್ತು ರಿಫಾಯಿ ಟ್ರೇಡಿಂಗ್ ಉಪ್ಪಿನಂಗಡಿ, ಸಿದ್ದಿಕ್ ಕಂಬಳಬೆಟ್ಟು ಗ್ರಾ ಪಂ ಸದಸ್ಯರು ವಿಟ್ಲ ಮುಡ್ನೂರು, ಸಿದ್ದಿಕ್ ಉರಿಮಜಲು ಗ್ರಾ ಪಂ ಸದಸ್ಯರು ಇಡ್ಕಿದು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫುಟ್ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಇನ್ನಿತರ ಕ್ರೀಡೆಗಳಿಗಾಗಿ ಉತ್ತಮ ಗುಣಮಟ್ಟದ ವಿವಿಧ ವಿನ್ಯಾಸದ ನೂತನ ಶೈಲಿಯ ಇಂಡೋರ್ ಸ್ಟೇಡಿಯಂ ಲಭ್ಯವಿದ್ದು ಕ್ರೀಡಾ ಪಟು ಗಳಿಗೆ ವಿಟ್ಲ ಪರಿಸರದಲ್ಲಿ ಒಂದು ಒಳ್ಳೆಯ ಸೌಲಭ್ಯ ಸಿಗಲಿದೆ