


ಇಡ್ಕಿದು: ಇಡ್ಕಿದು ಗ್ರಾಮದ ಉರಿಮಜಲಿನ ಅಂಗಡಿಗಳ ಆಸು ಪಾಸಿನಲ್ಲಿ ಕೆಲವೊಂದು ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಅನೇಕ ಬಾರಿ ಕಂಡು ಬಂದಿದೆ ಆದರೆ ಈ ನಾಪತ್ತೆ ಪ್ರಕರಣದ ಹಿಂದಿನ ಜಾಡನ್ನು ಹಿಡಿಯಲೇಬೇಕೆನ್ನುವ ಉದ್ದೇಶದಿಂದ ಹಲವಾರು ಬಾರಿ ಪ್ರಯತ್ನ ಪಟ್ಟರು ಕಳ್ಳನನ್ನು ಹಿಡಿಯಲು ಅಸಾಧ್ಯವಾಗಿತ್ತು .
ಕಳೆದೆರಡು ದಿನಗಳ ಹಿಂದೆ ಗ್ಯಾರೇಜ್ ನಲ್ಲಿ ರಿಪೇರಿಗೆ ಬಂದ ಬೈಕ್ಗಳ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ ಶಾಪ್ ನ ಒಳಗಡೆ ಇಟ್ಟು ಗ್ಯಾರೇಜ್ ಮಾಲಕರು ಊಟದ ಸಮಯವಾದುದರಿಂದ ಊಟಕ್ಕೆ ಬಂದಿದ್ದು, ಆ ಸಮಯವನ್ನು ಸದುಪಯೋಗಪಡಿಸಿಕೊಂಡು ಅಳಕೆಮಜಲ್ ನ ಕದೀಮ ಕಳ್ಳನೆಂದು ಪ್ರಖ್ಯಾತಿಯಾಗಿರುವ ರಶೀದ್ ಕೋಲ್ಪೆ ಯಾನೆ ಅಚುಕು ತನ್ನ ಕೈಚಲಕವನ್ನು ಹಗಲು ಹೊತ್ತಿನಲ್ಲೇ ತೋರಿಸಿರುತ್ತಾನೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲವೆ ಹಾಗೆಯೇ ಈ ಕಳ್ಳ ಅಚುಕುನ ಕರಾಮತ್ತು ಸಿಸಿ ಕ್ಯಾಮೆರದ ಕಣ್ಣಲ್ಲಿ ಸೆರೆಯಾಗಿರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಖದೀಮ ಕಳ್ಳ ಅದೆಷ್ಟೋ ಮಂದಿಯ ತಿನ್ನುವ ಅನ್ನಕೆ ಕೈ ಹಾಕಿ ಅವರ ಉಪಯುಕ್ತವಾದ ವಸ್ತುಗಳನ್ನು ಕದಿಯುತ್ತಿದ್ದನೋ ಆ ದೇವರೆ ಬಲ್ಲ. ಮಧ್ಯ ವ್ಯಸನೀಯಾದ ಈತ ಕುಡಿಯಲು ಹಣ ಇಲ್ಲದಿದ್ದರೆ ಒಬ್ಬರಿಗೆ ತಿಳಿಯದೆ ತನ್ನ ಕರಾಮತ್ತನ್ನು ತೋರಿಸುತ್ತಿದ್ದ ಈ ಕದೀಮ ಕಳ್ಳ ಅಚುಕನ ಬಗ್ಗೆ ಎಚ್ಚರವಿರಲಿ.