Saturday, June 28, 2025
spot_imgspot_img
spot_imgspot_img

ಓಲೆಮುಂಡೋವು ಪರಿಸರದಲ್ಲಿ ಕಾಡಾನೆ ಪತ್ತೆ- ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ; ಜನರು ಆತಂಕ ಪಡಬೇಕಾಗಿಲ್ಲ ಶಾಸಕ ಕುಮಾರ್‍ ಅಶೋಕ್ ರೈ

- Advertisement -
- Advertisement -

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಎರಬೈಲ್ ನಲ್ಲಿ ಕಾಡಾನೆಯೊಂದು ಪತ್ತೆಯಾಗಿದ್ದು ಅದನ್ನು‌ಮರಳಿ ಕಾಡಿಗಟ್ಟುವ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ನಡೆಯುತ್ತಿದ್ದು ಜನ ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಬುಧವಾರ ರಾತ್ರಿ ಕಾಡಾನೆ ಎರಬೈಲ್ ನಲ್ಲಿ ಕಂಡು ಬಂದ ಬಗ್ಗೆ ಜನರು ಇಲಾಖೆಗೆ ಮಾಹಿತಿ‌ ನೀಡಿದ್ದಾರೆ.‌ ತಕ್ಷಣ ಅರಣ್ಯ ಇಲಾಖೆಯ‌ ಅಧಿಕಾರಿಗಳಿಗೆ ಕರೆ ಮಾಡಿ ಅನಾಹುತವಾಗದಂತೆ ಎಚ್ಚರದಿಂದ ಇರಬೇಕು ಮತ್ತು ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕೆಲಸವನ್ನು ಇಲಾಖೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ. ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದ್ದು ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.

- Advertisement -

Related news

error: Content is protected !!