Sunday, June 29, 2025
spot_imgspot_img
spot_imgspot_img

ಕುವೈತ್ ನ ಭೀಕರ ಅಗ್ನಿ ದುರಂತಕ್ಕೆ ಕಾಸರಗೋಡು ಮೂಲದ ಇಬ್ಬರು ಮೃತ್ಯು

- Advertisement -
- Advertisement -

ಕಾಸರಗೋಡು: ಕುವೈತ್ ನ ಬಹುಮಹಡಿ ಕಟ್ಟಡದಲ್ಲಿ ಬುಧವಾರ ಮುಂಜಾನೆ ಉಂಟಾದ ಭೀಕರ ಅಗ್ನಿ ದುರಂತದಲ್ಲಿ ಕಾಸರಗೋಡು ಮೂಲದ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಚೆರ್ಕಳ ಕುಂಡಡ್ಕದ ರಂಜಿತ್ ( 34) ಹಾಗೂ ತೃಕ್ಕರಿಪುರ ಎಳಂಬಚ್ಚಿಯ ಪಿ . ಕುಂಞ ಕೇಳು ( 55) ಮೃತಪಟ್ಟವರು.

ರಂಜಿತ್ ಕಳೆದ ಎಂಟು ವರ್ಷಗಳಿಂದ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದರು. ಒಂದು ವರ್ಷದ ಹಿಂದೆ ಊರಿಗೆ ಬಂದು ಮರಳಿದ್ದರು . ಚೆರ್ಕಳ – ಕುಂಡಡ್ಕದ ರವೀಂದ್ರ – ರಮಣಿ ದಂಪತಿ ಪುತ್ರ.

ಪಿ . ಕುಂಞ ಕೇಳು ಕುವೈತ್ ನ ಎನ್.ಬಿ.ಟಿ.ಸಿ ಕಂಪೆನಿಯ ಪ್ರೊಡಕ್ಷನ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತದಲ್ಲಿ ಕಾಸರಗೋಡಿನ ಹಲವು ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ದುರಂತದಲ್ಲಿಲ್ಲಿ ಕೇರಳ ಮೂಲದ 11 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!