- Advertisement -
- Advertisement -


ಪುಂಜಾಲಕಟ್ಟೆ : ದಂಪತಿ ಹಾಗೂ ಮಗನಿಗೆ ನೆರೆಮನೆಯ ನಿವಾಸಿಗಳು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುವ ಘಟನೆ ಬಂಟ್ವಾಳದ, ಉಳಿ ಗ್ರಾಮದಲ್ಲಿ ನಡೆದಿದೆ.
ಸೇಸಮ್ಮ ಎಂಬವರ ದೂರಿನಂತೆ, ಸೇಸಮ್ಮ ಹಾಗೂ ನೆರೆಮನೆಯ ನಿವಾಸಿಗಳಾದ ಶೀನಾ ಶರತ್ ಸದಾಶಿವ ಚೋಮು ರವರ ನಡುವೆ ಹಲವು ವರ್ಷಗಳಿಂದ ತಕರಾರಿದ್ದು, ದಿನಾಂಕ 19/06.2024 ರಂದು ರಾತ್ರಿ, ಸೇಸಮ್ಮ ಹಾಗೂ ಮಕ್ಕಳು ಮನೆಯಲ್ಲಿರುವಾಗ, ಸೇಸಮ್ಮರ ಗಂಡ ಮನೆಯ ಬಳಿ ರಿಕ್ಷಾವನ್ನು ನಿಲ್ಲಿಸಿರುವುದನ್ನು ಕಂಡು ಸೇಸಮ್ಮ ಹಾಗೂ ಮಗ ದೀಪಕ್ ಅಲ್ಲಿಗೆ ತೆರಳಿದ್ದು, ಈ ವೇಳೆ ನೆರೆಮನೆಯ ಆರೋಪಿ ಸದಾಶಿವ ಎಂಬವರು ಸೇಸಮ್ಮರವರ ಗಂಡನನ್ನು ಉದ್ದೇಶಿಸಿ ಅವ್ಯಾಚವಾಗಿ ಬೈಯ್ಯುತ್ತಿದ್ದು, ಸ್ಥಳಕ್ಕೆ ಬಂದ ತಾಯಿ (ಸೇಸಮ್ಮ) ಮಗ ದೀಪಕ್ ನಿಗೆ ಮತ್ತೋರ್ವ ಆರೋಪಿ ಪವನ್ ಎಂಬಾತನು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ52/2024 ಕಲಂ: 323,324,504,506,34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -