ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದೆರ್ ವಿಟ್ಲಾ ಮೈರಾ ಕೇಪು ಅಭಿನಯದ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕದ ಯಶಸ್ವಿ ನಂತರ ತುಳು ರಂಗ ಭೂಮಿಗೆ ಮತ್ತೊಂದು ವಿಭಿನ್ನ ರೀತಿದ ನಾಟಕ ನೀಡಲು ಮುಂದಾಗಿದ್ದು, ಈ ನಾಟಕದ ಶುಭ ಮುಹೂರ್ತ ಇಂದು ಬೆಳಿಗ್ಗೆ ಕೇಪು ಸುಬ್ರಾಯ ದೇವಸ್ಥಾನದಲ್ಲಿ ತಂಡದ ಅಧ್ಯಕ್ಷರು,ನಿರ್ದೇಶಕರು ಹಾಗೂ ಹಿರಿಯರ ಸಮ್ಮುಖದಲ್ಲಿ ನಡೆಯಿತು.
ಬಳಿಕ ಹೊಸ ನಾಟಕದ ಶೀರ್ಷಿಕೆ ಬಿಡುಗಡೆಯಾಯಿತು.
ತುಳು ರಂಗಭೂಮಿಗೆ ವಿಭಿನ್ನ ರೀತಿದ ಪ್ರಯೋಗ ಮಾಡಬೇಕು ಹಂಬಲದಿಂದ ಸತ್ಯ ಘಟನೆ ಆಧಾರಿತದ ಕಥೆಯ ಹಂದರವಿರುವ ಈ ನಾಟಕವು ಕಾಂಚನ ಎಂದು ಹೆಸರಿನ ಮೂಲಕ ಪ್ರಧರ್ಶನಗೊಳ್ಳಲಿದೆ.
ಅದೇ ರೀತಿ ಕಲ್ಜಿಗದ ಕಾಳಿ ಮಂತ್ರ ದೇವತೇ ನಾಟಕ ಕೂಡ ಪ್ರಧಶನ ಬುಕ್ಕಿಂಗ್ ನಡೆಯುತ್ತಿದ್ದೂ ಈಗಾಗಲೇ ಹಲವು ಪ್ರಧರ್ಶನಕ್ಕೆ ಬುಕ್ಕಿಂಗ್ ಆಗಿದೆ ಎಂದು ನಾಟಕ ತಂಡ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ಜಗಜೀವನ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಮನು ಪಂಜ ಉದ್ಯಮಿ, ಸುಧಾಕರ್ ಪೂಜಾರಿ ಬಡಕೋಡಿ, ರಾಜೇಶ್ ಕರವಿರ, ಪದ್ಮನಾಭ ಕಲ್ಲಂಗಳ, ನಿತಿನ್ ಹೊಸಂಗಡಿ ಹಾಗೂ ಪುಗರ್ತೆ ಕಲಾ ತಂಡದ ಕಲಾವಿದರು ತಾಂತ್ರಿಕ ವರ್ಗ ಹಾಗೂ ಧ್ವನಿ ಮತ್ತು ಬೆಳಕಿನ ವರ್ಗದವರು ಉಪಸ್ಥಿತರಿದ್ದರು.
ನಾಟಕ ಪ್ರಧರ್ಶನಕ್ಕೆ ಕರೆ ನೀಡಿ
9902194995, 7090266635, 6362755135