- Advertisement -
- Advertisement -



ಬೆಳ್ತಂಗಡಿ: ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಕೊಕ್ಕಡ ಗ್ರಾಮ ಬೆಳ್ತಂಗಡಿ ಎಂಬಲ್ಲಿ ನಡೆದಿದೆ.
ಕೊಕ್ಕಡ ಗ್ರಾಮ ಬೆಳ್ತಂಗಡಿ ಶ್ರೀನಾಥ ಬಿ ಎಂಬವರ ದೂರಿನಂತೆ ತಮ್ಮ ಮನೆಯಲ್ಲಿ ಇದ್ದ ವೇಳೆ ವಾಟ್ಸಾಫ್ ಗೆ ಅವರ ಬ್ಯಾಂಕಿಗೆ ಸಂಬಂಧಿಸಿರುವಂತೆ ಮೆಸೆಜ್ ಬಂದಿರುತ್ತದೆ. ಆ ಮೆಸೇಜ್ ನಲ್ಲಿದ್ದ ಲಿಂಕ್ ನ್ನು ಶ್ರೀನಾಥ ರವರು ಓಪನ್ ಮಾಡಿದ ತಕ್ಷಣ ವಾಟ್ಸಾಫ್ ಬ್ಲಾಕ್ ಆಗಿರುತ್ತದೆ. ಬಳಿಕ ಯಾವುದೇ ಓಟಿಪಿ ನೀಡದಿದ್ದರೂ, ಇವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾನೆ ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 53/2024 ಕಲಂ: 417,419 IPC 66 (c) 66( D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.
- Advertisement -