- Advertisement -
- Advertisement -



ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಸೀತಾಂಗೋಳಿ – ಪೆರ್ಲ ರಸ್ತೆಯ ಬಾಡೂರಿನಲ್ಲಿ ನಡೆದಿದೆ.
ಶಿರಿಯ ಕುನಿಲ್ ಶಾಲೆಯ ಬಸ್ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಬಸ್ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು, ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಸ್ನಲ್ಲಿ ಕೆಲವೇ ಕೆಲ ವಿದ್ಯಾರ್ಥಿಗಳಿದ್ದರು. ಇದರಿಂದ ಭಾರೀ ಅಪಾಯ ತಪ್ಪಿದೆ ಎನ್ನಲಾಗಿದೆ.
- Advertisement -