


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಈ ಹಿನ್ನಲೆ ಶನಿವಾರ ಮಂಗಳೂರಿನ ಕಾವೂರು ಜಂಕ್ಷನ್ನಲ್ಲಿ ಬಿಜೆಪಿ ನಾಯಕರು ಧರಣಿ ನಡೆಸಿದ್ದರು. ‘ಶಾಸಕರ ಮೇಲೆ ಕಾಂಗ್ರೆಸ್ ಸರ್ಕಾರ ಸುಳ್ಳು ಎಫ್.ಐ.ಆರ್ ದಾಖಲಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಭರತ್ ಶೆಟ್ಟಿಯವರು- ಈ ಒಂದು ಹೋರಾಟ ಭರತ್ ಶೆಟ್ಟಿಯವರ ಮೇಲೆ ಎಫ್.ಐ.ಆರ್ ಹಾಕಿದ್ದಾರೆ ಎಂಬುದಲ್ಲ ಎಂದು ನಾನು ಅಂದುಕೊಂಡಿದ್ದೇನೆ , ಇವರಿಗೆ ಕೇಸ್ ಹಾಕುವುದು ಒಂದು ಅಭ್ಯಾಸ ಆಗಿ ಹೋಗಿದೆ, ಜಯ್ ಶ್ರೀ ರಾಮ್ ಎಂದು ಕೂಗಿದವರ ಮೇಲೆ ಕೇಸ್ ಹಾಕುತ್ತಾರೆ, ಆ ಅಭ್ಯಾಸಕ್ಕೆ ಒಂದು ಮದ್ದು ಕೊಡಬೇಕು ಎನ್ನುವ ದೃಷ್ಟಿಕೋನದೊಂದಿಗೆ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದರು.
ಈಗ ಕಾಂಗ್ರೇಸಿನವರು ಕೆಲವು ಪ್ರತಿಭಟನೆ ಮಾಡಿದ್ರೂ ರಮಾನಾಥ ರೈಯವರು ಹೇಳಿದರು ತಾಕತ್ತಿದ್ದರೆ ನಮ್ಮ ಒಬ್ಬನ ಕಾರ್ಯಕರ್ತನ ಮೈ ಮುಟ್ಟಲಿ ಎಂದು,ನಾನ್ಯಾಕೆ ಮುಟ್ಟಲಿ ಅವರನ್ನು ಹಿಂದುತ್ವದ ವಿರುದ್ದ ಯಾರು ಮಾತಾನಾಡುತ್ತಾರೋ ಅವರಿಗೆ ಇದೇ ಟ್ರೀಟ್ಮೆಂಟ್ ಅದು ಕಾರ್ಯಕರ್ತನಾಗಲೀ, ರಾಹುಲ್ ಗಾಂಧಿ ಆಗಲೀ, ಸಿದ್ದರಾಮಯ್ಯನವರೇ ಆಗಲೀ ಅವರಿಗೆ ಇದೇ ಟ್ರೀಟ್ಮೆಂಟ್ ಎಂದು ಮಾಧ್ಯಮದವರ ಮುಖಾಂತರ ಹೇಳಲು ಬಯಸುತ್ತೇನೆ. ಹಿರಿಯ ನಾಯಕರಿಗೆ ಏಕವಚನದಲ್ಲಿ ಬೈದದ್ದು ಇಧೆ ರಮಾನಾಥ ರೈ ಇವರು ಈಗ ನನಗೆ ಶಾಂತಿಮಂತ್ರ ಹೇಳುತ್ತಾರೆ ಎಂದರು.
ಇಮ್ರಾನ್ ಮಸೂದ್ ಎನ್ನುವ ವ್ಯಕ್ತಿ ಮೋದಿಯವರ ತಲೆ ಕಡಿಬೇಕು ಎಂದು ಹೇಳುತ್ತಾನೆ. ಅವನಿಗೆ ಕಾಂಗ್ರೇಸ್ಸಿನವರು M.P. ಸೀಟ್ ಕೊಡುತ್ತಾರೆ.ಅವನನ್ನು ಚುನಾವಣೆಯಲ್ಲಿ ನಿಲ್ಲಿಸಿ ನಮಗೆ ಬುದ್ದಿ ಹೇಳುತ್ತಾರೆ. ಹಿಂದೂಗಳನ್ನು ಜಾತಿ ಜಾತಿ ಎಂದು ತುಂಡು ತುಂಡು ಮಾಡಿ ನಮ್ಮ ಬೇಳೆ ಬೆಯಿಸಿಕೊಳ್ಳಬಹುದೆನ್ನುವ ಮನಸ್ತಿತಿಯಲ್ಲಿದ್ದಾರೆ, ಈಗ ಹಿಂದು ಸಹ ಎಚ್ಚೆತ್ತುಕೊಂಡಿದ್ದಾನೆ. ಈಗಲೂ ನಮ್ಮ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಇದೆ ಎಂದರೆ ಅದು ಹಿಂದುಗಳಿಂದಾಗಿದೆ.
ಡೆಂಟಲ್-ಮೆಂಟಲ್ ಎಂದು ನನಗೆ ಇನಾಯತ್ ಅಲಿ ಅವರು ಹೇಳಿದರು ಆಗ ಕಾರ್ಯಕರ್ತರು ಗುಜಿರಿ ವ್ಯಾಪಾರ ಮಾಡಲಿ ಎಂದು ಸಲಹೆ ಕೊಟ್ಟರು. ಮತ್ತೊಮ್ಮೆ ಕಾಂಗ್ರೇಸ್ಸಿನವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ ನಿಮ್ಮ ರಾಜಕೀಯ ನೀವು ಮಾಡಿ ಹಿಂದೂ ಧರ್ಮದ ವಿಷಯಕ್ಕೆ ಬರಬೇಡಿ, ಹಿಂದೂ ಧರ್ಮದ ವಿಷಯ ಮಾತನಾಡಲು ಹೋಗಬೇಡಿ, ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಖಂಡಿತ ಬಿಡುವುದಿಲ್ಲ ಬಿಡುವ ಪ್ರಶ್ನೆಯೇ ಇಲ್ಲ ಎಂದರು