- Advertisement -
- Advertisement -




ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೋರ್ಯ ಮುಟ್ಟಿಕಲ್ಲು ಪ್ರಗತಿಪರ ಕೃಷಿಕ ಶೀನಪ್ಪ ಪೂಜಾರಿ (107) ನಿನ್ನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪಾವೂರು ಭಂಡಾರದ ಮನೆ ಕೋಟ್ಯಾನ್ ಕುಟುಂಬದ ಹಿರಿಯ ಕೊಂಡಿ ಶತಾಯುಷಿಯಾಗಿದ್ದ ಶೀನಪ್ಪ ಪೂಜಾರಿ ವಯೋ ಸಹಜವಾಗಿ ನಿಧನರಾಗಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು ಬಾಳ್ತಿಲದ ಮಾಜಿ ಮಂಡಲ ಪ್ರಧಾನರಾಗಿದ್ದರು. ಮೃತರು ಎರಡು ಪುತ್ರರನ್ನು ಹಾಗೂ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
- Advertisement -