Friday, June 27, 2025
spot_imgspot_img
spot_imgspot_img

ಪುಣಚ : ಕಾರ್ಗಿಲ್ ವಿಜಯೋತ್ಸವದ 25ನೇಯ ವರ್ಷಾಚರಣೆ ಪ್ರಯುಕ್ತ ಕಾರ್ಗಿಲ್ ಸಮರಾಂಗಣದಲ್ಲಿ ಸೇವೆ ಸಲ್ಲಿಸಿದ ವೀರ ಸೈನಿಕರಿಗೆ ಗೌರವಾರ್ಪಣೆ

- Advertisement -
- Advertisement -

ಪುಣಚ : ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ಥಾನವನ್ನು ಸೋಲಿಸಿ ವಿಜಯದಿವಸ ದಿನಾಚರಣೆಗೆ 25ವರುಷ ತುಂಬಿದ ಶುಭ ಸಂದರ್ಭದಲ್ಲಿ ಕಾರ್ಗಿಲ್ ಸಮರಾಂಗಣದಲ್ಲಿ ಸೇವೆ ಸಲ್ಲಿಸಿದ ವೀರ ಸೈನಿಕರಾದ ಪುಣಚ ಗ್ರಾಮದ ಆಜೇರುಮಜಲು ನಿವಾಸಿಯಾಗಿರುವ ವೆಂಕಪ್ಪ ಗೌಡರನ್ನು ಮತ್ತು ವಿಟ್ಲ ಮುಡ್ನೂರು ಗ್ರಾಮದ ಹಡೀಲು ನಿವಾಸಿಯಾಗಿರುವ ಸೇಶಪ್ಪ ಗೌಡರನ್ನು ಬಿಜೆಪಿ ಪುಣಚ ಮಹಾಶಕ್ತಿ ಕೇಂದ್ರದ ವತಿಯಿಂದ ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು‌.

ಈ ಸಂದರ್ಭದಲ್ಲಿ ಪುಣಚ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಪ್ರ.ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜ್ರೇಮಾರ್,ಭಾಜಪ ರೈತಮೋರ್ಚ ಪ್ರ.ಕಾರ್ಯದರ್ಶೀ ಹಾಗೂ ವಿ.ಮುಡ್ನೂರು ಪಂಚಾಯತು ಅಧ್ಯಕ್ಷರಾದ ಪುನೀತ್ ಮಾಡತ್ತಾರ್,ಜಿಲ್ಲಾ ಒ.ಬಿ.ಸಿ ಮೋರ್ಚ ಉಪಾಧ್ಯಕ್ಷರಾದ ಗುರುವಪ್ಪ ಪೂಜಾರಿ,ಮಹಾಶಕ್ತೀ ಕೇಂದ್ರ ಸದಸ್ಯರಾದ ಹರೀಶ್ ಪುಣಚ,ವಿ.ಮುಡ್ನೂರು ಮತ್ತು ಪುಣಚ 1ಶಕ್ತೀ ಕೇಂದ್ರ ಸದಸ್ಯರುಗಳಾದ ಗೋವಿಂದರಾಜ್ ಭಟ್ ಮತ್ತು ಹರೀಶ್ ಭಟ್,ವಿ.ಮುಡ್ನೂರು ಪಂಚಾಯತು ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ನಾಯಕ್, ಪಕ್ಷದ ಸ್ಥಳೀಯ ಮುಖಂಡರಾದ ಹರೀಶ್ ಪೂಜಾರಿ,ಗಿರೀಶ್ ಹಡೀಲು,ಬೂತ್ ಕಾರ್ಯದರ್ಶಿ ದಿನೇಶ್ ನಾಯ್ಕ್,ಪ್ರೇಮಲತಾ ಸೇಶಪ್ಪಗೌಡ,ಜ್ಯೋತಿ ವೆಂಕಪ್ಪಗೌಡ ಉಪಸ್ಥಿತರಿದ್ದರು.

- Advertisement -

Related news

error: Content is protected !!