Friday, June 27, 2025
spot_imgspot_img
spot_imgspot_img

ಕಲ್ಲಡ್ಕ ಪರಿಸರದಲ್ಲಿ ಚಿನ್ನದ ಬಳೆ ಸಿಕ್ಕಿದ ಪ್ರಕರಣ: ವಿಟಿವಿ ವರದಿಯ ಫಲಶ್ರುತಿ-ಹಸ್ತಾಂತರ : ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ವಾರಿಸುದಾರರಿಗೆ ಮರುನೀಡಿದ ಚಿಂತನ್‌ ವಿನ್ಯಾಸರವರಿಗೆ ಎಲ್ಲೆಡೆ ಪ್ರಶಂಸೆ

- Advertisement -
- Advertisement -

ಕಲ್ಲಡ್ಕ : ಉಪ್ಪಿನಂಗಡಿಯಿಂದ ಮಂಗಳೂರು ಸಂಚರಿಸುವ ಅಕ್ಷಯ ಬಸ್ ನಲ್ಲಿ ಒಂದು ಚಿನ್ನದ ಬಳೆಯು ಚಿಂತನ್‌ ವಿನ್ಯಾಸರವರಿಗೆ ಸಿಕ್ಕಿದ್ದು, ಅವರು ತಕ್ಷಣ ವಿಟಿವಿ ಮಾಧ್ಯಮ ಸಂಸ್ಥೆಗೆ ಮಾಹಿತಿ ನೀಡಿದ್ದರು. , ವಿಟಿವಿ ನ್ಯೂಸ್‌ನಲ್ಲಿ ಚಿನ್ನದ ಬಳೆಯ ವಾರಿಸುದಾರರ ಪತ್ತೆಗಾಗಿ ಮೊಬೈಲ್‌ ಸಂಖ್ಯೆಗೆ ಕರೆ ಮಾಡಬೇಕೆಂದು ಪ್ರಕಟಿಸಲಾಗಿತ್ತು.

ನ್ಯೂಸ್‌ ನೋಡಿದ ಚಿನ್ನದ ಬಳೆಯ ವಾರಿಸುದಾರರಾದ ಉಪ್ಪಿನಂಗಡಿ ಮುಗೆರಡ್ಕ ನಿವಾಸಿ ಚಂದ್ರಹಾಸ ಎಂಬವರು ಕರೆ ಮಾಡಿದ್ದರು, ಚಿಂತನ್‌ ವಿನ್ಯಾಸರವರು ಚಿನ್ನದ ಬಳೆಯನ್ನು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿ, ಅವರ ಸಮ್ಮುಖದಲ್ಲಿ ವಾರಿಸುದಾರರಿಗೆ ನೀಡಲಾಯಿತು.

ಚಿನ್ನದ ಬೆಲೆಯು ಗಗನಕ್ಕೇರಿರುವ ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಿದ್ದುಸಿಕ್ಕಿದ ಚಿನ್ನವನ್ನು ವಾರಿಸುದಾರರಿಗೆ ಮರುನೀಡಿ ಮಾನವೀಯತೆ ಮೆರೆದ ಚಿಂತನ್‌ ವಿನ್ಯಾಸರವರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Related news

error: Content is protected !!