- Advertisement -
- Advertisement -



ವಿಟ್ಲ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ವಿಟ್ಲ ಘಟಕ ಆಶ್ರಯದಲ್ಲಿ 30 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಯು ವೇದಮೂರ್ತಿ ಉದಯೇಶ ಕೆದಿಲಾಯರ ನೇತೃತ್ವದಲ್ಲಿ ವಿಟ್ಲದ ಅನಂತ ಸದನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ವಿಟ್ಲ ಘಟಕದ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಕ ಸಭೆಯಲ್ಲಿ ಆರತಿ ದಾಸಪ್ಪ ಪ್ರವಚನ ನೀಡಿದರು. ಮುಖ್ಯ ಅತಿಥಿಯಾಗಿ ಡಾ ಗಾಯತ್ರಿ ಗೀತಪ್ರಕಾಶ್ ಉಪಸ್ಥಿತರಿದ್ದರು. ಭವ್ಯ ರಾಜೇಶ್ ಸ್ವಾಗತಿಸಿದರು. ರಶ್ಮಿ ಹರೀಶ್ ವಂದಿಸಿದರು, ರೇವತಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.
- Advertisement -