Sunday, June 29, 2025
spot_imgspot_img
spot_imgspot_img

ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

- Advertisement -
- Advertisement -

ಬೆಳ್ತಂಗಡಿ: ಕೊಯ್ಯರು ಬೆಳಾಲು ರಸ್ತೆಯಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್‌ ಸವಾರ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಬೆಳಾಲು ಗ್ರಾಮದ ನಿವಾಸಿ ಉಮೇಶ್ ಗೌಡ ರವರ ಪುತ್ರ, ಗುರುವಾಯನಕೆರೆ ಖಾಸಾಗಿ ಕಾಲೇಜಿನ ವಿದ್ಯಾರ್ಥಿ ಜೀವ ಎಂದು ಗುರುತಿಸಲಾಗಿದೆ.

ಆ. 11ರಂದು ಜೀವ ಎಂದಿನಂತೆ ಮನೆಯಿಂದ ಬೈಕ್ ನಲ್ಲಿ ಗೆಳೆಯನ ಮನೆಯವರೆಗೆ ಬರುತ್ತಿರುವಾಗ ಮಲೆಬೆಟ್ಟು ನಿನ್ನಿಕಲ್ಲು ಎಂಬಲ್ಲಿ ಪಿಕಪ್ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿತ್ತು, ಅಪಘಾತದಲ್ಲಿ ಬೈಕ್‌ ಸವಾರ ಜೀವ ಅವರು ಗಂಭೀರ ಗಾಯಗೊಂಡಿದ್ದು ಕೂಡಲೇ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆ. 17ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.

- Advertisement -

Related news

error: Content is protected !!