



ಮಂಗಳೂರು: ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ.) ಮಂಗಳೂರು ಇದರ ಆಶ್ರಯದಲ್ಲಿ ದೈವಾರಾಧನೆಗ್ ಒಂಜಿ ದಿನ ನಂಬಿಕೆ ಒರಿಪಾಗ ಕಾರ್ಯಕ್ರಮವು ಸೆ.01ನೇ ಆದಿತ್ಯವಾರ ಬೆಳಿಗ್ಗೆ 9:00ಕ್ಕೆ ಸಹಕಾರಿ ಸದನ, ಕಾವೂರು ಬೊಂದೆಲ್ ಇಲ್ಲಿ ನಡೆಯಲಿದೆ.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ದೈವ ನರ್ತಕ ಶ್ರೀ ಲೊಕಯ್ಯ ಸೇರಾ, ಹಿರಿಯ ದೈವ ನರ್ತಕ ಎನ್.ಕೆ. ಸಾಲ್ಯಾನ್,ದೈವ ನರ್ತಕ ದಯಾನಂದ ಕತ್ತಲ್ಸಾರ್, ತುಳು ಜಾನಪದ ವಿದ್ವಾಂಸರು ಮಹೇಂದ್ರನಾಥ ಸಾಲೆತ್ತೂರು, ಚಿಂತಕ, ಬರಹಗಾರ, ಪ್ರಖರ ವಾಗ್ಮಿ , ಹಿಂದು ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ, , ಲೇಖಕ, ಚಿಂತಕ ಮನ್ಮಥ ಶೆಟ್ಟಿ, ಹಿಂದು ಮುಖಂಡರು ವಿ.ಹಿಂ.ಪ ಶರಣ್ ಪಂಪ್ವೆಲ್ , ತುಳುನಾಡ ದೈವರಾಧನ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ದಿಲ್ರಾಜ್ ಆಳ್ವ, ವಾಗ್ಮಿ, ಚಿಂತಕ ತಮ್ಮಣ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಭಾಪತಿಗಳು ,ಕರ್ನಾಟಕ ವಿಧಾನ ಸಭೆ ಯು. ಟಿ. ಖಾದರ್, ಲೊಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಹಿರಿಯ ದೈವ ನರ್ತಕ ಚಂದು ನಲಿಕೆ, ಹಿರಿಯ ದೈವ ನರ್ತಕ ಬೈಲ್ ಸಂಜೀವ, ದೈವರಾಧನೆ ಚಿಂತಕ ಪ್ರಕಾಶ್ ಪೂಜಾರಿ, ವಾಗ್ಮಿ ,ವಕೀಲ ಕು| ಸಹನ ಕುಂದರ್ ಸೂಡ, ಮೇಯರ್ , ಮಂಗಳೂರು ಮಹಾನಗರ ಪಾಲಿಕೆ ಸುಧೀರ್ ಶೆಟ್ಟಿ ಕಣ್ಣೂರು, ಬಿರುವೆರ್ ಕುಡ್ಲ ಉದಯ ಪೂಜಾರಿ, ಸ್ಥಳೀಯ ಕಾರ್ಪೋರೇಟರ್ ಕಾವೂರು ಸುಮಂಗಳ, ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಪ್ರಸ್ಥಾವನೆ ಧನುಷ್ ಶೆಟ್ಟಿ, ಹಾಗೂ ಸಂವಾದ ತಮ್ಮಣ್ಣ ಶೆಟ್ಟಿ ಮಾಡಲಿದ್ದಾರೆ.


